ಇರಾನ್ ನಿಂದ ಡ್ರೋನ್ ದಾಳಿಯ ಚಿತ್ರ 
ವಿದೇಶ

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

ಮಧ್ಯಾಹ್ನದ ಸುಮಾರಿನಲ್ಲಿ ಎರಡು ಡ್ರೋನ್‌ಗಳು ಇರಾನ್‌ನಿಂದ ಅಜೆರ್‌ಬೈಜಾನ್‌ನ ನಖಿಚೆವಾನ್‌ನ ಎಕ್ಸ್‌ಕ್ಲೇವ್‌ ಕಡೆಗೆ ಹಾರಿವೆ. ಇದು ಇರಾನ್‌ನ ಗಡಿಯಲ್ಲಿದ್ದು, ಅರ್ಮೇನಿಯಾದಿಂದ ಬೇರ್ಪಟ್ಟಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಬಾಕು: ವಿಮಾನ ನಿಲ್ದಾಣ ಮತ್ತು ಶಾಲೆಯೊಂದರ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಗಾಯಗೊಂಡ ನಂತರ ಅಜರ್ ಬೈಜಾನ್ ಗುರುವಾರ ಇರಾನ್ ರಾಯಭಾರಿಗೆ ಸಮನ್ಸ್ ನೀಡಿದೆ.

ಮಧ್ಯಾಹ್ನದ ಸುಮಾರಿನಲ್ಲಿ ಎರಡು ಡ್ರೋನ್‌ಗಳು ಇರಾನ್‌ನಿಂದ ಅಜೆರ್‌ಬೈಜಾನ್‌ನ ನಖಿಚೆವಾನ್‌ನ ಎಕ್ಸ್‌ಕ್ಲೇವ್‌ ಕಡೆಗೆ ಹಾರಿವೆ. ಇದು ಇರಾನ್‌ನ ಗಡಿಯಲ್ಲಿದ್ದು, ಅರ್ಮೇನಿಯಾದಿಂದ ಬೇರ್ಪಟ್ಟಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

"ಒಂದು ಡ್ರೋನ್ ನಖಿಚೆವನ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಮೇಲೆ ಬಿದ್ದಿದ್ದರೆ, ಮತ್ತೊಂದು ಡ್ರೋನ್ ಶೇಕರಾಬಾದ್ ಗ್ರಾಮದ ಶಾಲಾ ಕಟ್ಟಡದ ಬಳಿ ಬಿದ್ದಿದೆ" ಎಂದು ಸಚಿವಾಲಯ ಹೇಳಿದೆ. ವಿಮಾನ ನಿಲ್ದಾಣಕ್ಕೆ ಹಾನಿಯಾಗಿದ್ದು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

ನಮ್ಮ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಪ್ರತೀಕಾರದ ಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ದಾಳಿಗೆ ಉತ್ತರಿಸದೇ ಇರಲ್ಲ ಎಂದು ಬಾಕು ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ. ಅಂತಾರಾಷ್ಟ್ರೀಯ ಕಾನೂನಿನ ನಿಯಮಗಳು ಮತ್ತು ತತ್ವಗಳನ್ನು ವಿರೋಧಿಸುವ ಮತ್ತು ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗೆ ನೆರವು ನೀಡುವ ದಾಳಿಯ ಬಗ್ಗೆ ಬಲವಾದ ಪ್ರತಿಭಟನೆ ದಾಖಲಿಸಲು ಬಾಕುದಲ್ಲಿರುವ ಇರಾನ್ ರಾಯಭಾರಿಗೆ ಸಮನ್ಸ್ ನೀಡಿರುವುದಾಗಿ ಸಚಿವಾಲಯ ಹೇಳಿದೆ.

ಅಜರ್‌ಬೈಜಾನ್‌ನ ಮಿತ್ರ ಹಾಗೂ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾದ ಇಸ್ರೇಲ್ ದಾಳಿಗಳನ್ನು ನಡೆಸಲು ಅಜರ್ ಬೈಜಾನ್ ಪ್ರದೇಶವನ್ನು ಬಳಸಬಹುದೆಂಬುದು ಇರಾನ್ ನ ಧೀರ್ಘಕಾಲದ ಕಳವಳವಾಗಿದೆ. ಕಳೆದ ಜೂನ್‌ನಲ್ಲಿ, ಇರಾನ್ ಮೇಲೆ ಇಸ್ರೇಲ್ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದ ನಂತರ ತನ್ನ ಪ್ರದೇಶವನ್ನು ಟೆಹ್ರಾನ್ ವಿರುದ್ಧದ ದಾಳಿಗೆ ಬಳಸಲು ಅನುಮತಿಸುವುದಿಲ್ಲ ಎಂದು ಅಜರ್ ಬೈಜಾನ್ ಇರಾನ್ ಗೆ ಭರವಸೆ ನೀಡಿತ್ತು. ಇರಾನ್‌ನಲ್ಲಿ ಅಜೆರಿ ಜನಸಂಖ್ಯೆ ಹೆಚ್ಚಾಗಿದ್ದು, ಸುಮಾರು 83 ಮಿಲಿಯನ್ ನಾಗರಿಕರಲ್ಲಿ ಸುಮಾರು 10 ಮಿಲಿಯನ್ ಇರಾನ್ ಜನರೇ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ