ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ 
ವಿದೇಶ

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್

ಈ ಎಮ್ಮೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಇಡಲಾಗಿದ್ದು, ಈದ್-ಉಲ್-ಅದಾಃ (ಬಕ್ರೀದ್‌) ಹಬ್ಬದ ಕುರ್ಬಾನಿಗಾಗಿ ಇದನ್ನು ಮಾರಾಟ ಮಾಡಲಾಗಿದೆ.

ಢಾಕಾ: ಈದ್-ಉಲ್-ಅದಾಃ (ಬಕ್ರೀದ್‌) ಹಬ್ಬದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೀತಿಯ ಹೊಂಬಣ್ಣದ ಕೂದಲನ್ನು ಹೊಂದಿರುವ ಅಪರೂಪದ ಅಲ್ಬಿನೋ ತಳಿಯ ಬಾಂಗ್ಲಾದೇಶದಲ್ಲಿನ ಎಮ್ಮೆಯೊಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಎಮ್ಮೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಇಡಲಾಗಿದ್ದು, ಈದ್-ಉಲ್-ಅದಾಃ (ಬಕ್ರೀದ್‌) ಹಬ್ಬದ ಕುರ್ಬಾನಿಗಾಗಿ ಇದನ್ನು ಮಾರಾಟ ಮಾಡಲಾಗಿದೆ.

ಈ ಎಮ್ಮೆಯು ಅಮೆರಿಕದ ಅಧ್ಯಕ್ಷರ ರೀತಿಯಲ್ಲಿ ಕಾಣುವುದರಿಂದ ಅದನ್ನು ನೋಡಲು ಜನರು ಮುಗಿಬಿದಿದ್ದಾರೆ. ಪ್ರತಿದಿನವೂ ನೂರಾರು ಜನರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಬಾಂಗ್ಲಾದ ರಾಜಧಾನಿ ಢಾಕಾ ಸಮೀಪದ ನಾರಾಯಣಗಂಜ್ ಜಿಲ್ಲೆಯ ಫಾರಂ ಒಂದರಲ್ಲಿ ಈ ಎಮ್ಮೆಯನ್ನು ಬೆಳೆಸಲಾಗುತ್ತಿದೆ. ಸುಮಾರು 700 ಕೆಜಿ ತೂಕವಿರುವ ಈ ಎಮ್ಮೆಗೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗಿದೆ.

ಟ್ರಂಪ್ ಎನ್ನುವ ಹೆಸರು ಇಡಲು ಕಾರಣವೇನು ಎನ್ನುವುದನ್ನು ಎಮ್ಮೆಯ ಮಾಲೀಕ ಜಿಯಾ ಉದ್ಧಿನ್ ಮೈರ್ಡಾ ವಿವರಿಸಿದ್ದಾರೆ. ಎಮ್ಮೆಯ ಹಣೆ ಮತ್ತು ತಲೆಯ ಮೇಲ್ಬಾಗದಲ್ಲಿ ಹರಡಿರುವ ತಿಳಿ ಬಣ್ಣದ ವಿಶಿಷ್ಟವಾದ ಕೂದಲಿನ ಶೈಲಿ. ಇದು, ಅಮೆರಿಕದ ನಾಯಕರ ಹೇರ್ ಸ್ಟೈಲ್ ಹೋಲುತ್ತದೆ. ಹೀಗಾಗಿ ಅದಕ್ಕೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗಿದೆ ಎಂದು ಎಮ್ಮೆಯ ಮಾಲೀಕರು ಅಭಿಪ್ರಾಯ ಪಟ್ಟಿದ್ದಾರೆ.

ಕುರ್ಬಾನಿಗಾಗಿ ಎರಡು ತಿಂಗಳ ಹಿಂದೆ ಇದನ್ನು ಖರೀದಿಸಲಾಯಿತು. ಆಗ ಇದು ಸುಮಾರು 597 ಕೆಜಿ ತೂಕವಿತ್ತು. ಸುಮಾರು 330,000 ಬಹದ್ದೂರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 2.5 ಲಕ್ಷ ) ಕೊಟ್ಟು ಸಾಮಾನ್ಯ ರೀತಿಯಲ್ಲಿ ಖರೀದಿಸಿದ್ದೇವು. ಆದರೆ ಈಗ ಅದು ಹೆಚ್ಚು ಪ್ರಸಿದ್ಧಿಯಾಗಿದ್ದು, ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಜನರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ