ಅಂಜನಾ- ಆನ್ ಮೇರಿ ಮ್ಯಾಥ್ಯೂ - ಅನಿಲಾ 
ವಿದೇಶ

ಇಬ್ಬರು ಮಲಯಾಳಿ ಗೆಳತಿಯರ ಹತ್ಯೆ: ಒಬ್ಬರಿಗೆ ಚಾಕುವಿನಿಂದ ಇರಿದು, ಮತ್ತೊಬ್ಬರ ಮೇಲೆ ಕಾರು ಹತ್ತಿಸಿದ್ದ ಭಾರತ ಮೂಲದ ಮಹಿಳೆ ಬಂಧನ!

ಒಬ್ಬರನ್ನು ಚಾಕುವಿನಿಂದ ಇರಿದು ಮತ್ತು ಇನ್ನೊಬ್ಬರ ಮೇಲೆ ಕಾರು ಹರಿಸಿ ಭೀಕರವಾಗಿ ಹತ್ಯೆಗೈದ ಆರೋಪದ ಮೇಲೆ 32 ವರ್ಷದ ಭಾರತೀಯ ಮೂಲದ ಮಹಿಳೆ ಅನಿಲಾ ಬೇಬಿಯನ್ನು ಬಂಧಿಸಲಾಗಿದೆ.

ಹೂಸ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ತನ್ನ ಇಬ್ಬರು ಗೆಳತಿಯರನ್ನು ಕೊಲೆ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಒಬ್ಬರನ್ನು ಚಾಕುವಿನಿಂದ ಇರಿದು ಮತ್ತು ಇನ್ನೊಬ್ಬರ ಮೇಲೆ ಕಾರು ಹರಿಸಿ ಭೀಕರವಾಗಿ ಹತ್ಯೆಗೈದ ಆರೋಪದ ಮೇಲೆ 32 ವರ್ಷದ ಭಾರತೀಯ ಮೂಲದ ಮಹಿಳೆ ಅನಿಲಾ ಬೇಬಿಯನ್ನು ಬಂಧಿಸಲಾಗಿದೆ.

ಪೊಲೀಸ್ ಮತ್ತು ಮಾಧ್ಯಮ ವರದಿಗಳ ಪ್ರಕಾರ, 32 ವರ್ಷದ ಭಾರತೀಯ ಮೂಲದ ಮಹಿಳೆ ಅನಿಲಾ ಬೇಬಿ, ಸುಮಾರು 90 ನಿಮಿಷಗಳ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ತನ್ನ ಸ್ನೇಹಿತೆಯರಾದ 35 ವರ್ಷದ ಆನ್ ಮೇರಿ ಮ್ಯಾಥ್ಯೂ ಮತ್ತು 35 ವರ್ಷದ ಅಂಜನಾ ಹರಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ಮತ್ತು ಮೃತಪಟ್ಟ ಇಬ್ಬರೂ ಮಹಿಳೆಯರು ಆಕೆಯ ಸ್ನೇಹಿತೆಯರಾಗಿದ್ದು, ಮೂಲತಃ ಕೇರಳದವರಾಗಿದ್ದಾರೆ.

ಈ ಹತ್ಯೆಗಳು ಆಗಸ್ಟ್ 28 ರಂದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ 'ಸೌತ್ ಬೇ' ಪ್ರದೇಶದಲ್ಲಿರುವ ಸ್ಯಾನ್ ಜೋಸ್ ಮತ್ತು ಮಿಲ್ಪಿತಾಸ್ ಎಂಬ ಎರಡು ನಗರಗಳಲ್ಲಿ ನಡೆದಿವೆ; ಈ ನಗರಗಳು ಪರಸ್ಪರ 20 ಕಿಲೋಮೀಟರ್‌ಗಿಂತ ಕಡಿಮೆ ಅಂತರದಲ್ಲಿವೆ.

ಪ್ರಕರಣ ತನಿಖೆ ನಡೆಸಿದ ಅಧಿಕಾರಿಗಳು ಈ ಎರಡು ಹತ್ಯೆಗಳ ನಡುವೆ ಸಂಬಂಧವಿರುವುದನ್ನು ಪತ್ತೆಹಚ್ಚಿದರು ಮತ್ತು ಬೇಬಿಯನ್ನು ಶಂಕಿತ ಆರೋಪಿ ಎಂದು ಗುರುತಿಸಿದರು ಎಂದು 'ಎಬಿಸಿ7 ನ್ಯೂಸ್' ವರದಿ ಮಾಡಿದೆ.

ಅದೇ ದಿನ ಬೇಬಿಯನ್ನು ವಶಕ್ಕೆ ಪಡೆಯಲಾಯಿತು ಮತ್ತು ಆರಂಭದಲ್ಲಿ ಮಿಲ್ಪಿತಾಸ್‌ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ಅವರ ಮೇಲೆ ಆರೋಪ ಹೊರಿಸಲಾಯಿತು.

ತ್ರಿಶೂರ್‌ನಲ್ಲಿರುವ ಅಂಜನಾ ಕುಟುಂಬದವರು,ಆಕೆಯ ಸ್ನೇಹಿತೆಯಾದ ಅನಿಲಾ ಎಂಬಾಕೆಯೇ ಅಂಜನಾಳನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿದ್ದರು. ಅಂಜನಾಳ ಸೋದರಸಂಬಂಧಿ ವಿನೋದ್ ಪ್ರಕಾರ, ಅಂಜನಾ ಮತ್ತು ಅನಿಲಾ ಇಬ್ಬರಿಗೂ ಸ್ನೇಹಿತೆಯಾಗಿದ್ದ ಆನ್ ಮೇರಿ ಅವರ ಹತ್ಯೆಯಲ್ಲೂ ಅನಿಲಾಳ ಕೈವಾಡವಿರಬಹುದು ಎಂದು ಶಂಕಿಸಿದ್ದರು. ಈ ಮೂವರು ಒಂದೇ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರ್ತೀನಿ: ಹಿಂದೂಗಳ ತಂಟೆಗೆ ಹೋದರೆ ಹುಷಾರ್: ಸರ್ಕಾರಕ್ಕೆ ಅಶೋಕ್ ವಾರ್ನಿಂಗ್

'ತಾಕತ್ತಿದ್ದರೆ ಟ್ರೈ ಮಾಡು ಮಗ, ಆಲ್ ದಿ ಬೆಸ್ಟ್ ರಣಹೇಡಿ': ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದ ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಚಾಲೆಂಜ್!

ದೆಹಲಿಯಲ್ಲಿ ಮತ್ತೊಂದು ಅವಘಡ: ಸ್ವರೂಪ್ ನಗರದಲ್ಲಿ ಭಾರಿ ಬೆಂಕಿ ಅವಘಡ; 6 ಜನರಿಗೆ ಗಾಯ, ಭರದಿಂದ ಸಾಗಿದ ಕಾರ್ಯಾಚರಣೆ!

ಆಪರೇಷನ್‌ ನಡೆಯುತ್ತಿದ್ದಾಗಲೇ ವಿದ್ಯುತ್‌ ಕಡಿತ; ಮೊಬೈಲ್‌ ಟಾರ್ಚ್‌ ಬೆಳಕಲ್ಲೇ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ! ಬಿಹಾರ ಆಸ್ಪತ್ರೆ ಅವ್ಯವಸ್ಥೆ!

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR