'ಹನುಮಾನ್ ಅಂಶ್' ಸೀಕ್ವೆಲ್‌ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ?; ಅತಿಥಿ ಪಾತ್ರಗಳ ಬಗ್ಗೆ ಮೌನ ಮುರಿದ ನಿರ್ಮಾಪಕಿ!

ನಾನು ಮತ್ತು ವಿಶಾಲ್ ಇಬ್ಬರೂ ಅವರ ಭಕ್ತರು. ಮಹಾರಾಜ್ ಜಿ ಅವರೊಂದಿಗೆ ನಮಗೆ ವೈಯಕ್ತಿಕ ಒಡನಾಟವಿದೆ. ನಮ್ಮ ಸಂತರು ಮತ್ತು ಮಹನೀಯರ ಕುರಿತು ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಜಗತ್ತಿಗೆ ಪರಿಚಯಿಸಲು ನಾವು ಬಯಸುತ್ತೇವೆ ಎಂದರು.
Hanuman Ansh - Virat Kohli and Anushka Sharma
ಹನುಮಾನ್ ಅಂಶ್ - ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
Updated on

ನವದೆಹಲಿ: ಅನಿರೀಕ್ಷಿತ ಯಶಸ್ಸು ಕಂಡ 'ಹನುಮಾನ್ ಅಂಶ' (Hanuman Ansh) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬಿಡುಗಡೆಯಾಗಿ 35 ದಿನಗಳು ಕಳೆದಿರುವ ಹೊತ್ತಿಗೆ, ಈ ಚಿತ್ರವು ಭಾರತದಲ್ಲಿ ₹163.13 ಕೋಟಿ ನಿವ್ವಳ ಗಳಿಕೆ ಕಂಡಿದೆ. ಈ ಚಿತ್ರವನ್ನು ಯಾರ ಜೀವನವನ್ನು ಆಧರಿಸಿ ನಿರ್ಮಿಸಲಾಗಿದೆಯೋ, ಆ ನೀಮ್ ಕರೋಲಿ ಬಾಬಾ ಅವರ ಅನುಯಾಯಿಗಳಾದ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜೂಲಿಯಾ ರಾಬರ್ಟ್ಸ್ ಮುಂತಾದವರು ಚಿತ್ರದ ಸೀಕ್ವೆಲ್‌ನಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ನಿರ್ಮಾಪಕಿ ನಮ್ರತಾ ಸಿಂಗ್ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.

ನಮ್ರತಾ ಸಿಂಗ್ 'ಬಾಲಿವುಡ್ ಹಂಗಾಮಾ' ಜೊತೆ ಮಾತನಾಡಿ, 'ನಾನು ಅವರಲ್ಲಿ ಕೆಲವರನ್ನು ಸಂಪರ್ಕಿಸಿದ್ದೇನೆ ಮತ್ತು ಅವರಿಗೆ ಈ ಚಿತ್ರದ ಬಗ್ಗೆ ಮೊದಲೇ ತಿಳಿದಿತ್ತು' ಎಂದಿದ್ದಾರೆ.

'ನಾನು ಮತ್ತು ವಿಶಾಲ್ ಇಬ್ಬರೂ ಅವರ ಭಕ್ತರು. ಮಹಾರಾಜ್ ಜಿ ಅವರೊಂದಿಗೆ ನಮಗೆ ವೈಯಕ್ತಿಕ ಒಡನಾಟವಿದೆ- ನನಗೆ 14 ವರ್ಷ ಮತ್ತು ವಿಶಾಲ್‌ಗೆ 20 ವರ್ಷಗಳ ಒಡನಾಟವಿದೆ. ನಮ್ಮ ಸಂತರು ಮತ್ತು ಮಹನೀಯರ ಕುರಿತು ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಜಗತ್ತಿಗೆ ಪರಿಚಯಿಸಲು ನಾವು ಬಯಸುತ್ತೇವೆ. ಭಾರತದಲ್ಲಿ ಅವರ ಪ್ರಭಾವಕ್ಕೆ ಒಳಗಾದ ಸಾವಿರಾರು ಭಕ್ತರಿದ್ದಾರೆ ಮತ್ತು ನಿಸ್ಸಂದೇಹವಾಗಿ ಅವರಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. 'ಕೈಂಚಿ' ಕಥೆಯು ಭಾರತೀಯ ಭಕ್ತರ ಕುರಿತಾದದ್ದು. ಇನ್ನು ಮೂರನೇ ಚಿತ್ರವು, ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಟ್ವಿಟರ್ ಸ್ಥಾಪಕ ಜ್ಯಾಕ್ ಡೋರ್ಸಿ, ಜೂಲಿಯಾ ರಾಬರ್ಟ್ಸ್ ಮುಂತಾದ ವಿದೇಶಿಯರಿಗೆ ಅವರು ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಸಂಚರಿಸುವ ಮೂಲಕ ಭಾರತವನ್ನು ಜಾಗತಿಕ ಭೂಪಟದಲ್ಲಿ ಹೇಗೆ ಗುರುತಿಸುವಂತೆ ಮಾಡಿದರು ಎಂಬುದರ ಮೇಲೆ ಗಮನಹರಿಸಲಿದೆ. ಆದಾಗ್ಯೂ, ಆ ವಿಷಯವನ್ನು ನಾವು ನಂತರ (ಮೂರನೇ ಭಾಗದಲ್ಲಿ) ಪ್ರಸ್ತಾಪಿಸುತ್ತೇವೆ' ಎಂದರು.

ಬಿಡುಗಡೆಯಾಗಿ ಸಾಮಾನ್ಯ ಆರಂಭ ಪಡೆದ 'ಹನುಮಾನ್ ಅಂಶ್' ಚಿತ್ರವು ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಕಾಣುತ್ತಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು ಜನರ ಬಾಯ್ಮಾತಿನ ಪ್ರಚಾರದ (word of mouth) ಮೂಲಕವೇ ಸಾವಿರಾರು ಪ್ರೇಕ್ಷಕರನ್ನು ತಲುಪಿದ್ದು, ಭಾರತದಲ್ಲಿ ₹60 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

Hanuman Ansh - Virat Kohli and Anushka Sharma
'ಕಷ್ಟದಲ್ಲಿ ಸಹಾಯ ಮಾಡದವರು ಈಗ ಅಭಿನಂದಿಸುತ್ತಿದ್ದಾರೆ': ಬಾಲಿವುಡ್ ಕುರಿತು 'ಹನುಮಾನ್ ಅಂಶ್' ನಿರ್ದೇಶಕ ವಿಶಾಲ್ ಚತುರ್ವೇದಿ

ಚಿತ್ರದ ಈ ಯಶಸ್ಸಿನ ನಡುವೆಯೇ, ಈ ಕಥೆಯು ಮುಂದಿನ ಭಾಗದೊಂದಿಗೆ (ಸೀಕ್ವೆಲ್) ಮತ್ತೆ ಬರಲಿದೆ ಎಂದು ನಿರ್ದೇಶಕರು ಖಚಿತಪಡಿಸಿದ್ದಾರೆ.

ಆಗಸ್ಟ್ 7 ರಂದು ಬಿಡುಗಡೆಯಾದ 'ಹನುಮಾನ್ ಅಂಶ' ಚಿತ್ರವು ನೀಮ್ ಕರೋಲಿ ಬಾಬಾ ಅವರ ಕಥೆಯಲ್ಲಿ ಇನ್ನೂ ಹೆಚ್ಚಿನ ವಿಷಯಗಳಿವೆ ಎಂಬ ಸುಳಿವನ್ನು ನೀಡುವ ಮೂಲಕ ಕೊನೆಗೊಂಡಿತ್ತು. ಇದೀಗ ನಿರ್ಮಾಪಕರು ಈ ಕಥೆಯನ್ನು ಮುಂದುವರಿಸುತ್ತಿದ್ದಾರೆ ಎಂಬುದನ್ನು ವಿಶಾಲ್ ಖಚಿತಪಡಿಸಿದ್ದು, ಇದರ ಎರಡನೇ ಭಾಗದ ಕೆಲಸಗಳು ಈಗಾಗಲೇ ನಡೆಯುತ್ತಿವೆ.

ವಿಶಾಲ್ ಇತ್ತೀಚೆಗೆ ಆಗ್ರಾದ ಮಲ್ಟಿಪ್ಲೆಕ್ಸ್ ಒಂದರಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು ತಮ್ಮ ಮುಂದಿನ ಚಿತ್ರದ ಕುರಿತಾದ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಸೀಕ್ವೆಲ್ ಪ್ರೇಕ್ಷಕರನ್ನು ನೀಮ್ ಕರೋಲಿ ಬಾಬಾ ಅವರ ಜೀವನದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹಲವು ಸ್ಥಳಗಳಿಗೆ ಕರೆದೊಯ್ಯಲಿದೆ ಎಂದು ತಿಳಿಸಿದರು.

ಈ ಕಥೆಯು ಮೊದಲು ಅವರ ಜನ್ಮಸ್ಥಳವಾದ ಫಿರೋಜಾಬಾದ್‌ನೊಂದಿಗಿನ ಅವರ ನಂಟನ್ನು ಪರಿಶೀಲಿಸುತ್ತದೆ. ಅಲ್ಲಿಂದ, ಅವರ ಆಧ್ಯಾತ್ಮಿಕ ಪಯಣಕ್ಕೆ ಸಂಬಂಧಿಸಿದ ಆಗ್ರಾ, ಮಥುರಾ ಮತ್ತು ಇತರ ಸ್ಥಳಗಳಿಗೆ ಕಥೆಯು ಸಾಗುತ್ತದೆ. ಮೊದಲ ಚಿತ್ರದಲ್ಲಿ ಒಳಗೊಳ್ಳಲು ಸಾಧ್ಯವಾಗದಿದ್ದ ನೀಮ್ ಕರೋಲಿ ಬಾಬಾ ಅವರ ಜೀವನದ ಪ್ರಮುಖ ಹಂತಗಳನ್ನು ಪರಿಶೀಲಿಸುವುದೇ ಇದರ ಉದ್ದೇಶ ಎಂದು ವಿಶಾಲ್ ವಿವರಿಸಿದರು.

'ಹನುಮಾನ್ ಅಂಶ'ವನ್ನು ಒಂದು ಬೃಹತ್ ಕಥೆಯ ಮೊದಲ ಭಾಗವಾಗಿ ರೂಪಿಸಲಾಗಿದೆ. ಫೆಬ್ರುವರಿ 20, 2026 ರಂದು ಈ ಯೋಜನೆಯನ್ನು ಘೋಷಿಸಿದಾಗ, ಇದನ್ನು ಮೂರು ಭಾಗಗಳ ಸರಣಿಯಾಗಿ (ಟ್ರೈಲಜಿ) ನಿರ್ಮಿಸಲು ಯೋಜಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದರು. ಈ ಚಿತ್ರಗಳು ವಿಶಾಲ್ ಚತುರ್ವೇದಿ ಅವರು ಬರೆದ 'ಡಿವೈನ್ ಡಿಟೂರ್' (Divine Detour) ಎಂಬ ಪುಸ್ತಕದಿಂದ ಸ್ಫೂರ್ತಿ ಪಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com