ಈ ಹಿನ್ನಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಬರುತ್ತಿರುವ ಪ್ರತಿಕ್ರಿಯೆಗಳು ನನಗೆ ಸಾಕಷ್ಟು ಆಘಾತವನ್ನು ತರಿಸಿದೆ. ಕತ್ಯಾರಾಜ್ ಅವರು ನನ್ನ ಜೊತೆ 5 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಸತ್ಯರಾಜ್ ನೀಡಿದ್ದಾರೆನ್ನಲಾದ ಹೇಳಿಗೆ ಬಗ್ಗೆ ನಾವು ವಿಚಾರಣೆ ಆರಂಭಿಸಿದಾಗ ಆದು 9 ವರ್ಷದ ಹಿಂದೆ ನೀಡಿದ ಹೇಳಿಕೆ ಎಂದು ತಿಳಿದುಬಂದಿತ್ತು. ಇದಾದ ಬಳಿಕ ಸತ್ಯರಾಜ್ ಅವರ 30 ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಬಾಹುಬಲಿ-1 ಕೂಡ ಬಿಡುಗಡೆಯಾಗಿದೆ. ಆಗ ಈ ಬಗ್ಗೆ ಯಾರೂ ತಕರಾರು ಎತ್ತಿರಲಿಲ್ಲ. ಈಗ ಏಕಾಏಕಿ ತಕಾರರು ಎತ್ತಲಾಗುತ್ತಿದೆ ಎಂದು ಹೇಳಿದ್ದಾರೆ.