ಜಾತಿ ಬಣ್ಣ ಹಚ್ಚಬೇಡಿ, ವೀರ ಮದಕರಿ ವಿವಾದಕ್ಕೆ ನವರಸ ನಾಯಕ ಜಗ್ಗೇಶ್ ಕೊಟ್ಟ ತಿರುಗೇಟು!

ಚಿತ್ರದುರ್ಗದ ವೀರ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಚಿತ್ರ ನಿರ್ಮಾಣ ಮತ್ತು ನಟನೆಯ ವಿಚಾರವಾಗಿ ಸ್ಯಾಂಡಲ್ವುಡ್ ನ ಖ್ಯಾತ...
ಸುದೀಪ್-ದರ್ಶನ್-ಜಗ್ಗೇಶ್
ಸುದೀಪ್-ದರ್ಶನ್-ಜಗ್ಗೇಶ್
Updated on
ಬೆಂಗಳೂರು: ಚಿತ್ರದುರ್ಗದ ವೀರ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಚಿತ್ರ ನಿರ್ಮಾಣ ಮತ್ತು ನಟನೆಯ ವಿಚಾರವಾಗಿ ಸ್ಯಾಂಡಲ್ವುಡ್ ನ ಖ್ಯಾತ ನಟರಾದ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಏರ್ಪಟ್ಟಿರುವ ಪ್ರತಿಷ್ಠೆಯ ಕಾದಾಟ ಜಾತಿಯ ಆಯಾಮ ಪಡೆದುಕೊಂಡಿದೆ. 
ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಹಿರಿಯ ನಟ ಜಗ್ಗೇಶ್ ಶಾರದಾಂಬೆಯ ಮಡಿಲಲ್ಲಿ ಜಾತಿ ಎಂಬುದು ಇರಬಾರದು. ಕಲೆಗೆ ಜಾತಿಯಿಲ್ಲ. ವಿಶ್ವದಲ್ಲೆ ಜಾತಿ ಇಲ್ಲದೆ ಒಂದೆ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು! ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ! ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತಬುದ್ಧಿ! ಎಚ್ಚರವಾಗಿರಿ ಕಲಾಬಂಧುಗಳೆ..!! ಎಂದು ಟ್ವೀಟ್ ಮಾಡಿದ್ದಾರೆ. 
ವೀರ ಮದಕರಿ ಚಿತ್ರ ನಿರ್ಮಾಣ ಕುರಿತು ಮಾತನಾಡಿದ್ದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ನಾಯಕ ಸಮುದಾಯದ ಸುದೀಪ್ ಅವರೇ ವೀರ ಮದಕರಿ ಸಿನಿಮಾ ಮಾಡಬೇಕು. ದರ್ಶನ್ ಸೇರಿದಂತೆ ಬೇರೆ ಯಾರಾದರೂ ಮಾಡಿದರೆ, ಈ ಸಿನಿಮಾವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com