ತಮಿಳುನಾಡಿನಲ್ಲಿ ಅರ್ಜುನ್ ಸರ್ಜಾ ಅವರು ನಿರ್ಮಿಸುತ್ತಿರುವ ಅತಿ ಎತ್ತರದ ಆಂಜನೇಯ ಸ್ವಾಮಿ ದೇವಾಲಯವೇ ಇಡೀ ಪ್ರಕರಣಕ್ಕೆ ಮೂಲ ಕಾರಣವಾಗಿದ್ದು, ಅರ್ಜುನ್ ಸರ್ಜಾ ಅವರ ಹಿಂದೂಪರ ಕಾಳಜಿ ಹಾಗೂ ಅವರು ಕಟ್ಟಿಸುತ್ತಿರುವ ಗೋಶಾಲೆಗಳು ಹಾಗೂ ಆಂಜನೇಯಸ್ವಾಮಿ ದೇವಾಲಯ ಹಾಗೂ ಅವರು ಮೋದಿ ಪರವಾಗಿ ಮಾತನಾಡುತ್ತಿರುವುದರಿಂದ, ಅಮೆರಿಕಾದಿಂದ ಶೃತಿ ಹರಿಹರನ್ ಗೆ ಹಣ ಸಂದಾಯವಾಗಿದೆ.. ಹೀಗಾಗಿ ದುಡ್ಡು ಪಡೆದು ಶೃತಿ ಈ ಕೆಲಸ ಮಾಡಿದ್ದಾರೆ ಎಂದು ಪ್ರಶಾಂತ್ ಶೃತಿ ವಿರುದ್ಧ ದಾಖಲಾಗಿರುವ ಎಫ್ ಐಆರ್ ಅನ್ನು ತೋರಿಸಿದ್ದಾರೆ.