
ಕೊಚ್ಚಿ: ಸುಕುಮಾರ ಕುರುಪ್ ಎಂಬ ವ್ಯಕ್ತಿ ಇಂದಿಗೂ ಕೇರಳ ರಾಜ್ಯದಲ್ಲಿ ದಂತಕಥೆ. 80ರ ದಶಕದಿಂದಲೂ ಆತ ಪೊಲಿಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದಾನೆ. ಮಲಯಾಳಿಗಳ ಬಾಯಲ್ಲಿ ಆತನ ಕಥೆಗಳು ನಾನಾ ರೀತಿಯಲ್ಲಿ ಇಂದಿಗೂ ಹರಿದಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಆತ ನಡೆಸಿದ ವಿಲಕ್ಷಣ ಅಪರಾಧ.
ಆತ ಒಬ್ಬ ಕೊಲೆಗಾರ. ಆದರೆ ಬರೀ ಅಷ್ಟೇ ಆಗಿದ್ದರೆ ಆತ ಯಾರ ನೆನಪಲ್ಲೂ ಉಳಿಯುತ್ತಿರಲಿಲ್ಲ. ದಂತಕಥೆಯೂ ಆಗುತ್ತಿರಲಿಲ್ಲ. ೮ ಲಕ್ಷ ರೂ. ಇನ್ಶೂರೆನ್ಸ್ ಹಣಕ್ಕಾಗಿ ತನ್ನನ್ನೇ ಹೋಲುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಸಾವಿನ ನಾಟಕವನ್ನು ಸೃಷ್ಟಿಸಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಭೂಪ ಸುಕುಮಾರ ಕುರುಪ್. ಪೊಲೀಸರು ಇಂದಿಗೂ ಅವನನ್ನು ಹುಡುಕುತ್ತಿದ್ದಾರೆ.
ಅವನ ಜೀವನವನ್ನಾಧರಿಸಿದ ಸಿನಿಮಾ ದುಲ್ಖರ್ ಸಲ್ಮಾನ್ ಅಭಿನಯದ 'ಕುರುಪ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಶೋಭಿತಾ ಧುಲಿಪಾಲ, ಇಂದ್ರಜಿತ್ ಸುಕುಮಾರನ್, ಸನ್ನಿ ವೇಯ್ನ್ ಮತ್ತಿತರರು ನಟಿಸಿದ್ದಾರೆ. ಸಿನಿಮಾ ನವೆಂಬರ್ 12ರಂದು ಮಲಯಾಳಂ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಶರಣ್-ಸುನಿ ಕಾಂಬಿನೇಷನ್ 'ಅವತಾರ ಪುರುಷ' ಬಿಡುಗಡೆ ದಿನಾಂಕ ಫಿಕ್ಸ್!
'ಟಾಮ್ ಅಂಡ್ ಜೆರ್ರಿ' ನಾಯಕಿ ಪಾತ್ರ ನಿಜಜೀವನದಲ್ಲಿ ನನ್ನನ್ನು ಹೋಲುತ್ತದೆ: ಚೈತ್ರಾ ರಾವ್
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಯತ್ನ..!
ಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'
ಸ್ಯಾಂಡಲ್ವುಡ್: ಅಂತೂ ಇಂತೂ ಒಳ್ಳೆ ಬುದ್ಧಿ ಬಂತಾ? ಫ್ಯಾನ್ಸ್ ವಾರ್ ಗೆ ಫುಲ್ ಸ್ಟಾಪ್ ಇಟ್ಟ ಫ್ಯಾನ್ಸ್!
ಜಯತೀರ್ಥ ನಿರ್ದೇಶನದ 'ಬನಾರಸ್' ಚಿತ್ರದ ಆಡಿಯೋ ಹಕ್ಕು ಟಿ-ಸೀರೀಸ್ ಸಂಸ್ಥೆಗೆ!
ಶಶಿಕಾಂತ್ ಆನೇಕಲ್ ನಿರ್ದೇಶನದ 'ಖಲಾಸ್' ಸಿನಿಮಾದಲ್ಲಿ ಆಯೇಷಾ
Advertisement