ಕಿರೀಟಿ ಡ್ಯಾನ್ಸ್ ನೋಡುವಾಗ ಅಪ್ಪು ನೃತ್ಯ ನೋಡುತ್ತಿರುವಂತೆ ಭಾಸವಾಗುತ್ತದೆ: ಶಿವರಾಜ್‌ಕುಮಾರ್

ಸಾಯಿ ಕೊರ್ರಪತಿ ಅವರ ವಾರಾಹಿ ಚಲನ ಚಿತ್ರಂ ಬ್ಯಾನರ್ ನಿರ್ಮಿಸಿದ ಜೂನಿಯರ್ ಚಿತ್ರಕ್ಕೆ ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ.
Junior poster (L) and the cast of the film with Shivarajkumar (R)
ಜೂನಿಯರ್ ಚಿತ್ರದ ಸ್ಟಿಲ್- ಶಿವರಾಜ್‌ಕುಮಾರ್ ಜೊತೆ ಚಿತ್ರತಂಡ
Updated on

ರಾಧಾಕೃಷ್ಣ ರೆಡ್ಡಿ ನಿರ್ದೇ1ಶನದ ಕಿರೀಟಿ ಅವರ ಚೊಚ್ಚಲ ಚಿತ್ರ ಜೂನಿಯರ್ ಜುಲೈ 18 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಲವಾದ ಭಾವನಾತ್ಮಕ ತಿರುಳು ಮತ್ತು ದೊಡ್ಡ ತಾರಾಬಳಗ ಮತ್ತು ಸಿಬ್ಬಂದಿಯೊಂದಿಗೆ ಈ ಚಿತ್ರವು ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚೆಗೆ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಶಿವರಾಜ್‌ಕುಮಾರ್, 'ನಾನು ಒಮ್ಮೆ ಮಾಧುರಿ ದೀಕ್ಷಿತ್ ಅವರ ಅಭಿಮಾನಿಯಾಗಿದ್ದೆ, ಆದರೆ ಈಗ ನಾನು ಶ್ರೀಲೀಲಾ ಅವರ ಅಭಿಮಾನಿಯಾಗಿದ್ದೇನೆ' ಎಂದು ಶ್ಲಾಘಿಸಿದರು. 'ಕಿರೀಟಿ ನೃತ್ಯವನ್ನು ನೋಡಿದಾಗ, ನಾನು ಮತ್ತೆ ಅಪ್ಪು ಅವರನ್ನು ನೋಡುತ್ತಿದ್ದೇನೆ ಎಂದು ನನಗೆ ಅನಿಸಿತು. ಇವರಿಬ್ಬರೂ ಜೂನಿಯರ್‌ಗಳಲ್ಲ- ಅವರು ಸೂಪರ್ ಸೀನಿಯರ್‌ಗಳು. ಇದು ಸುಂದರವಾದ ಕೌಟುಂಬಿಕ ಚಿತ್ರ ಮತ್ತು ನಾನು ಕುಟುಂಬದೊಂದಿಗೆ ಚಿತ್ರ ನೋಡುವೆ' ಎಂದು ಹೇಳಿದರು.

ಚಿತ್ರದಲ್ಲಿ ಕಿರೀಟಿಯ ತಂದೆಯ ಪಾತ್ರ ನಿರ್ವಹಿಸಿರುವ ಹಿರಿಯ ನಟ ರವಿಚಂದ್ರನ್ ವೇದಿಕೆಯಲ್ಲಿ ಭಾವುಕರಾದರು. 'ಈ ಚಿತ್ರ ನನ್ನ ಕನಸು, ಏಕೆಂದರೆ ಇದು ಪ್ರತಿಯೊಂದು ಕುಟುಂಬದ ಭಾವನೆಗಳನ್ನು ಹೊಂದಿದೆ. ನಾವು ಈ ಪ್ರಯಾಣವನ್ನು ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದ್ದೇವೆ. ಈ ಚಿತ್ರವು ನನಗೆ ಮತ್ತು ನನ್ನ ಪತ್ನಿಗೆ ನನ್ನ ಹಿಂದಿನ ಚಿತ್ರ ಮಾಣಿಕ್ಯವನ್ನು ನೆನಪಿಸಿತು. ಕಿರೀಟಿ ಒಂದು ಕ್ಷಣವೂ ಸ್ಟಾರ್ ಕಿಡ್‌ನಂತೆ ನಟಿಸಿಲ್ಲ; ಅವರು ಈ ಪಾತ್ರವನ್ನು ಪ್ರಾಮಾಣಿಕತೆಯಿಂದ ಬದುಕಿದ್ದಾರೆ' ಎಂದು ಅವರು ಹೇಳಿದರು.

'ನಾನು ಮೊದಲು ನೃತ್ಯ ಮಾಡಿದ ಹಾಡು ಜೋಗಿ ಚಿತ್ರದ 'ಹೊಡಿ ಮಗ'. ಅಪ್ಪು ಅವರ ಜಾಕಿ ಚಿತ್ರದ ಹಾಡು ನನಗೆ ನಟನಾಗಲು ಸ್ಫೂರ್ತಿ ನೀಡಿತು. ನನ್ನ ತಂದೆ ಅನೇಕ ತ್ಯಾಗಗಳನ್ನು ಮಾಡಿದ್ದಾರೆ ಮತ್ತು ಅವರ ಮಗನಾಗಿ ಹುಟ್ಟಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ" ಎಂದು ಕಿರೀಟಿ ಹೇಳಿದರು.

Junior poster (L) and the cast of the film with Shivarajkumar (R)
'ಜೂನಿಯರ್' ಮೂಲಕ ಜನಾರ್ಧನ್ ರೆಡ್ಡಿ ಮಗ ಕಿರೀಟಿ ಮಾಸ್ ಎಂಟ್ರಿ; ಜುಲೈ 18ರಂದು ಚಿತ್ರ ಬಿಡುಗಡೆ

ನಟಿ ಶ್ರೀಲೀಲಾ ಅವರು ಎಂಬಿಬಿಎಸ್‌ನ ಮೊದಲ ವರ್ಷದಲ್ಲಿದ್ದಾಗ ಜೂನಿಯರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾಗಿ ನೆನಪಿಸಿಕೊಂಡರು. 'ಈಗ ನಾನು ವೈದ್ಯೆಯಾಗಿದ್ದೇನೆ ಮತ್ತು ಚಿತ್ರವು ಅಂತಿಮವಾಗಿ ಬಿಡುಗಡೆಯಾಗುತ್ತಿದೆ. ನಿರ್ದೇಶಕರು ಸಮಯ ತೆಗೆದುಕೊಂಡರು. ಆದರೆ, ಗುಣಮಟ್ಟದ ಚಿತ್ರವನ್ನು ಮಾಡಿದ್ದಾರೆ. ಉತ್ತಮ ಕನ್ನಡ ಸ್ಕ್ರಿಪ್ಟ್‌ಗಳು ಸಿಗುತ್ತಲೇ ಇರುತ್ತವೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

13 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳುತ್ತಿರುವ ಜೆನಿಲಿಯಾ ಡಿಸೋಜಾ, 'ನನ್ನ ಮೊದಲ ಕನ್ನಡ ಚಿತ್ರ ಸತ್ಯ ಇನ್ ಲವ್ ವಿತ್ ಶಿವಣ್ಣ. ಜೂನಿಯರ್ ಜೊತೆ ಮತ್ತೆ ಬರಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಕಿರೀಟಿಯಂತಹ ನಾಯಕನನ್ನು ಹೊಂದಿರುವುದು ಉದ್ಯಮದ ಅದೃಷ್ಟ' ಎಂದರು.

ಸಾಯಿ ಕೊರ್ರಪತಿ ಅವರ ವಾರಾಹಿ ಚಲನ ಚಿತ್ರಂ ಬ್ಯಾನರ್ ನಿರ್ಮಿಸಿದ ಜೂನಿಯರ್ ಚಿತ್ರಕ್ಕೆ ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com