

ಕಲಬುರಗಿ: ಕಲಬುರಗಿ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಸ್ಪರ್ಧಿ ಕಾವ್ಯಾ ಶೈವ ಅವರಿಗೆ ಅವಮಾನ ನಡೆದಿದೆ ಎಂಬ ಆರೋಪವೊಂದು ಕೇಳಿಬಂದಿದೆ.
ಕಾರ್ಯಕ್ರಮದ ವೇಳೆ ಉಂಟಾದ ಗದ್ದಲ ಹಾಗೂ ಅಭಿಮಾನಿಗಳೊಂದಿಗೆ ನಡೆದ ತೀವ್ರ ವಾಗ್ವಾದದ ಬಳಿಕ ಕಾವ್ಯಾ ಅವರು ಕಾರ್ಯಕ್ರಮವನ್ನು ಮಧ್ಯದಲ್ಲೇ ಬಿಟ್ಟು ತೆರಳಿದ್ದಾರೆಂದು ತಿಳಿದುಬಂದಿದೆ.
ಬಿಗ್ಬಾಸ್ ಸೀಸನ್ 12 ಮೂಲಕ ಜನಪ್ರಿಯತೆ ಪಡೆದಿರುವ ಕಾವ್ಯಾ ಶೈವ, ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಈ ಕಾರ್ಯಕ್ರಮವೇ ಹೈಡ್ರಾಮಾ ನಡೆದಿದೆ.
ಕಾರ್ಯಕ್ರಮದ ವೇಳೆ ಕಾವ್ಯಾ ಅಭಿಮಾನಿಗಳು ಸೆಲ್ಫಿ ಪಡೆಯಲು ವೇದಿಕೆಗೆ ಹತ್ತುವ ಪ್ರಯತ್ನ ಮಾಡಿದ್ಜು, ಈ ವೇಳೆ ಆಯೋಜಕರು ಕೆಲವರನ್ನು ತಡೆದಿದ್ದಾರೆ. ಇದೇ ವೇಳೆ ಕೆಲ ಅಭಿಮಾನಿಗಳನ್ನೂ ತಳ್ಳಲಾಗಿದ್ದು, ಕಾವ್ಯಾ ಅವರ ಕೈಯಿಂದ ಮೈಕ್ ಕಸಿಯಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಸ್ಥಳದಲ್ಲಿದ್ದ ಕಾವ್ಯಾ ಅವರ ಅಭಿಮಾನಿಗಳು ಹಾಗೂ ಆಯೋಜಕರ ನಡುವೆ ತೀವ್ರ ಗದ್ದಲ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಕಾವ್ಯಾ ಅವರು ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement