ಇತ್ತೀಚಿನ ದಿನಗಳಲ್ಲಿ ಹೋದ ಕಡೆಯೆಲ್ಲ 'ಮುಂದಿನ ಎರಡು ದಶಕ ಭಾರತಕ್ಕೆ ಸೇರಿದ್ದು' ಎನ್ನುವ ಮಾತುಗಳನ್ನ ಹೇಳದೆ ವಾಪಸ್ಸು ಬರುತ್ತಿಲ್ಲ. ಅದಕ್ಕೆ ಕಾರಣ ಸ್ಪಷ್ಟವಿದೆ. ಕರೋನ ಜಗತ್ತನ್ನ ಭಾದಿಸುವ ಮುನ್ನವೇ ಯೂರೋಪು ಮತ್ತು ಅಮೇರಿಕಾ ದೇಶಗಳಿಗೆ ಚೀನಾ ದೇಶದ ಮೇಲಿನ ಹೆಚ್ಚಿದ ಅವಲಂಬನೆಯ ಅರಿವಾಗಿತ್ತು.
ಪಾಶ್ಚಾತ್ಯರಿಗೆ ಒಂದು ದೇಶದ ಮೇಲಿನ ಅತಿ ಹೆಚ್ಚಿನ ಅವಲಂಬನೆ ಒಂದಲ್ಲ ಒಂದು ದಿನ ಅಪಾಯವಾಗಿ ಪರಿವರ್ತನೆಯಾಗುತ್ತದೆ, ನಾವು ಮಾಡಿದ್ದು ತಪ್ಪು ಎನ್ನುವುದರ ಅರಿವಾಗಿತ್ತು. ಹೀಗಾಗಿ ಚೀನಾ ಪ್ಲಸ್ ಒನ್ ಎನ್ನುವ ನೀತಿಯನ್ನ ಅವರು ಜಪಿಸತೊಡಗಿದ್ದರು. ಹೀಗೆ ಚೀನಾ ಪ್ಲಸ್ ಒನ್ ಎಂದಾಗ ಚೀನವನ್ನ ಬೇಡವೆಂದ ತಕ್ಷಣ ಬಿಸಾಡಲು ಆಗುವುದಿಲ್ಲ ಎನ್ನುವುದನ್ನ ಒಪ್ಪಿಕೊಂಡಂತ್ತಿತ್ತು, ಅದರ ಜೊತೆಗೆ ಇನ್ನೊಂದು ದೇಶವನ್ನ ಸಹ ಚೀನಾ ದೇಶಕ್ಕೆ ಸೆಡ್ಡು ಹೊಡೆಯುವಂತೆ ಬೆಳಸಬೇಕು ಎನ್ನುವ ಮನೋಭಾವ ಕೂಡ ಕಾಣುತ್ತಿತ್ತು. ಹೀಗೆ ಗಾತ್ರದಲ್ಲಿ, ಜನಸಂಖ್ಯೆಯಲ್ಲಿ, ಕೆಲಸಕ್ಕೆ ಬೇಕಾಗುವ ಅರೆ ನೈಪುಣ್ಯ ಹೊಂದಿರುವ ವರ್ಕ್ ಫೋರ್ಸ್ ಜೊತೆಗೆ ಕಳೆದ ಎಂಟು ವರ್ಷಗಳಿಂದ ಯಾವುದೇ ರೀತಿಯ ದಂಗೆ, ಗಲಭೆಗಳಾಗದೆ, ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯುಳ್ಳ ದೇಶ ಭಾರತ.
ಹೀಗಾಗಿ ಭಾರತ ಹೂಡಿಕೆದಾರರ ಕಣ್ಣಿಗೆ ಡಾರ್ಲಿಂಗ್ ಅನ್ನಿಸಿಕೊಂಡಿತು. ಫಾರಿನ್ ಇನ್ವೆಸ್ಟರ್ಸ್ ಪರಿವಾಳಗಳಿದ್ದಂತೆ , ಎಲ್ಲಿ ಒಂದೆರೆಡು ಹೊಸಕಾಳು ಹಾಕುತ್ತಾರೆ ಅಲ್ಲಿಗೆ ಓಡಿ ಹೋಗುತ್ತಾರೆ. ಇದನ್ನ ಭಾರತದಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಓಡಿ ಹೋದ ಹಕ್ಕಿಗಳು ಅಲ್ಪಕಾಲದಲ್ಲೇ ಮರಳಿ ವಾಪಸ್ಸು ಬಂದದ್ದಕ್ಕೂ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಇದೀಗ ಭಾರತ ಎಲ್ಲಾ ಕೋನಗಳಿಂದ ಅತ್ಯುತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿದೆ. ಜಾಗತಿಕವಾಗಿ ಸಿಗುತ್ತಿರುವ ಹೊಸ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನ ನಿಭಾಯಿಸಿಸಲು ಸಿದ್ಧವಿದೆ. ಈ ಹೊಸ ಹೊಣೆಗಾರಿಕೆ ಭಾರತವನ್ನ ಪೂರ್ಣವಾಗಿ ಬದಲಾಯಿಸಲಿದೆ. ಮುಂದಿನ ಇಪ್ಪತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ಹೊಸ ಯಶೋಗಾಥೆಯನ್ನ ಜಗತ್ತಿಗೆ ಸಾರಲಿದೆ. ಎಲ್ಲವೂ ಸರಿ, ಆದರೆ ಭಾರತದ ಮುಂದೆ ಇಂದಿಗೂ ಒಂದಷ್ಟು ಹಳೆ ಸವಾಲುಗಳು ಇನ್ನೂ ಪ್ರಶ್ನೆಯಾಗಿ ಉಳಿದುಕೊಂಡಿವೆ. ಭಾರತ ಅತಿ ವೇಗವಾಗಿ ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ಇಪ್ಪತ್ತು ವರ್ಷ ನಮ್ಮ ಪಾಲಿಗೆ ಬರೆದುಕೊಳ್ಳುವಾಗ ಎಡವುವ ಸಾಧ್ಯತೆಯಿರುತ್ತದೆ.
ಇದನ್ನೂ ಓದಿ: ಜಗತ್ತಿನಲ್ಲಿ ಕುಟುಂಬ ವ್ಯಾಪಾರದ್ದೇ ಕಾರುಬಾರು!
ಏನಿದು ಅಂತಹ ಸಾವಾಲುಗಳು ನೋಡೋಣ ಬನ್ನಿ:
ಕೊನೆಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಭಾರತವನ್ನ ಬರಿ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಕೃತಿಯಲ್ಲೂ ಭವ್ಯವಾಗಿಸುವ ಅವಕಾಶ ನಮ್ಮ ಮುಂದಿದೆ. ಅದನ್ನ ಸಮರ್ಥವಾಗಿ ಬಳಸಿಕೊಳ್ಳುವ ಜಾಣತನ ನಮ್ಮದಾಗಬೇಕಿದೆ. ಭಾರತ ಭವ್ಯ ಹೇಗಾಗುತ್ತದೆ? ಅಲ್ಲಿನ ಜನರ ಬದುಕು ಸುಂದರವಾಗುತ್ತ ಹೋದಂತೆ ಭಾರತ ತಾನಾಗೇ ಭವ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಮೇಲಿನ ಸಮಸ್ಯೆಗಳಿಗೆ ಆದಷ್ಟೂ ಪರಿಹಾರ ಹುಡಕುವ ಪ್ರಯತ್ನ ಮಾಡಬೇಕಿದೆ. ಭಾರತದ ಯಶೋಗಾಥೆಯ ಜೊತೆಗೆ ನಮ್ಮ ಹೆಸರನ್ನ ಬರೆದುಕೊಳ್ಳುವ ಸುವರ್ಣಾವಕಾಶ ಎಲ್ಲರ ಮುಂದಿದೆ. ಸಮಸ್ಯೆಗಳಿವೆ, ನಾವು ಸಮಸ್ಯೆಯ ಭಾಗವಾಗಬೇಕೋ ಅಥವಾ ಪರಿಹಾರದ್ದೋ ಎನ್ನುವ ನಿರ್ಣಯ ನಾವು ಮಾಡಬೇಕಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement