21ನೇ ಓವರ್ ನಲ್ಲಿ ರವೀಂದ್ರ ಜಡೇಜಾ ಅವರ ಎಸೆತದಲ್ಲಿ ರೂಟ್ ಎಗ್ ಸೈಡ್ ನಲ್ಲಿ ಚೆಂಡನ್ನು ಸಿಡಿಸುತ್ತಾರೆ. ಈ ವೇಳೆ ಎರಡನೇ ರನ್ ಪಡೆಯಲು ಮುಂದಾಗುತ್ತಾರೆ ರೂಟ್ ಅಷ್ಟರಲ್ಲಿ ಫೀಲ್ಡರ್ ಚೆಂಡನ್ನು ಎಸೆದಿದ್ದರಿಂದ ಹಮೀದ್ರನ್ನು ಹಿಂದಕ್ಕೆ ಹೋಗುವಂತೆ ಹೇಳುತ್ತಾರೆ ಆದರೆ ಅಷ್ಟರಲ್ಲಾಗಲೇ ವೃದ್ಧಿಮಾನ್ ಸಹಾ ತಮ್ಮ ಚಾಣಾಕ್ಷ ನಡೆಯಿಂದಾಗಿ ಹಿಂಬದಿಯಾಗಿ ಚೆಂಡನ್ನು ವಿಕೆಟ್ ಗೆ ಹೊಡೆಯುತ್ತಾರೆ. ಅಂಪೈರ್ ಔಟ್ ಎಂಬ ತೀರ್ಪು ನೀಡುತ್ತಾರೆ.