ತಮ್ಮ ಶಾಂತಸ್ವಭಾವದಿಂದಾಗಿಯೇ ಧೋನಿ ಕೂಲ್ ಕ್ಯಾಪ್ಚನ್ ಎಂದು ಖ್ಯಾತಿ ಗಳಿಸಿದವರು. ಎಂತಹುದೇ ಪ್ರಚೋದನಕಾರಿ ವಾತಾವರಣವಿದ್ದರೂ ಅದನ್ನು ಶಾಂತ ಸ್ವಭಾವದಿಂದ ಧೋನಿ ಎದುರಿಸುತ್ತಾರೆ. ಅದೇ ಅವರ ಯಶಸ್ಸಿನ ಗುಟ್ಟು ಕೂಡ. ಆದರೆ ಇಂತಹ ಧೋನಿ ಕೂಡ ಹಲವು ಬಾರಿ ಕೋಪಗೊಂಡಿದ್ದಾರೆ. ಇವರ ಕೋಪಕ್ಕೆ ತುತ್ತಾದ ಸಹ ಆಟಗಾರರು ಪತರಗುಟ್ಟಿ ಹೋಗಿದ್ದು, ಇಂತಹುದೇ ತಮಗಾದ ಸಂದರ್ಭವನ್ನು ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.