ಶ್ರೇಯಸ್‌ಗೆ ಎಂಎಸ್ ಧೋನಿ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವಂತೆ ಹೇಳಿದ್ದು ಯಾಕೆ ಗೊತ್ತ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ನನಗೆ ಸಾಧ್ಯವಾದಷ್ಟು ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವಂತೆ ಸಲಹೆ ನೀಡಿದ್ದರು ಎಂದು ಯುವ ಕ್ರಿಕೆಟಿಗ...
ಶ್ರೇಯಸ್ ಅಯ್ಯರ್-ಎಂಎಸ್ ಧೋನಿ
ಶ್ರೇಯಸ್ ಅಯ್ಯರ್-ಎಂಎಸ್ ಧೋನಿ
ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ನನಗೆ ಸಾಧ್ಯವಾದಷ್ಟು ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವಂತೆ ಸಲಹೆ ನೀಡಿದ್ದರು ಎಂದು ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. 
ನಾನು ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರಿಕೊಂಡ ನಂತರ ಎಂಎಸ್ ಧೋನಿ ಅವರು ಸುದ್ದಿ ಪತ್ರಿಕೆಗಳು ಓದದಂತೆ ಮತ್ತು ಸಾಮಾಜಿಕ ಮಾಧ್ಯಮದಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದ್ದರು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. 
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಹರಾಜಿನಲ್ಲಿ ನಾನು ಆಯ್ಕೆಯಾದ ಸುದ್ದಿ ಹೊರಬಿದ್ದ ಬೆನ್ನಲ್ಲೇ ನನಗೆ ಪರಿಚಯವಿದ್ದ ಹುಡುಗಿಯ ನಡವಳಿಕೆ ಹೇಗೆ ಬದಲಾಯಿತು ಎಂಬುದನ್ನು ಶ್ರೇಯಸ್ ಅಯ್ಯರ್ ನೆನಪಿಸಿಕೊಂಡರು. 
ಐಪಿಎಲ್ ಗೆ ಆಯ್ಕೆಯಾದ ನಂತರ ಆ ಹುಡುಗಿ ನನಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದಳು. ನನ್ನನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದಳು. ಹಣಕ್ಕಾಗಿ ಆಕೆ ನನ್ನ ಬೆನ್ನು ಬಿದ್ದಿದ್ದಳು ಎಂದು ನನಗೆ ನಂತರ ತಿಳಿಯಿತು ಎಂದು ಶ್ರೇಯಸ್ ಹೇಳಿಕೊಂಡಿದ್ದಾರೆ. 
2018ರ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಶ್ರೇಯಸ್ ಅಯ್ಯರ್ 14 ಇನ್ನಿಂಗ್ಸ್ ನಲ್ಲಿ 411 ರನ್ ಪೇರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com