ಈ ಬಗ್ಗೆ ಆಂಗ್ಲ ಮಾಧ್ಯಮವೊಂದರೊಂದಿಗೆ ಮಾತನಾಡಿರುವ ಧವನ್, ಸಮತೋಲಿತ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಉಪಸ್ಥಿತಿ ಪ್ರಮುಖವಾಗಲಿದೆ. ಕೇದಾರ್ ಜಾದವ್ ಉತ್ತಮ ಆಲ್ ರೌಂಡ್ ಆಟದ ಪ್ರದರ್ಶನದ ಹೊರತಾಗಿಯೂ ಪಾಂಡ್ಯ ನಮ್ಮ ತಂಡದ 'ಗೋಲ್ಡನ್ ಆರ್ಮ್' ಇದ್ದಂತೆ. ಪಾಂಡ್ಯ ಉಪಸ್ಥಿತಿ ನಮಗೆ ಖಂಡಿತಾ ಉಪಯೋಗಕವಾಗುತ್ತದೆ. ಪಾಂಡ್ಯ ಪಡೆಯುವ ವಿಕೆಟ್ ಗಳು ಮತ್ತು ಬ್ಯಾಟಿಂಗ್ ನಲ್ಲಿ ಗಳಿಸುವ ರನ್ ಗಳು ತಂಡಕ್ಕೆ ಸಕಾರಾತ್ಮಕವಾಗಿರುತ್ತದೆ. ಟೆಸ್ಟ್ ಮತ್ತು ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಪಾಂಡ್ಯ ಓರ್ವ ಉತ್ತಮ ಆಟಗಾರ ಎಂದು ಧವನ್ ಹೇಳಿದ್ದಾರೆ.