ಕೊನೆಯ ಓವರ್ ನಲ್ಲಿ ಚೆನ್ನೈಗೆ ಗೆಲ್ಲಲು 26 ರನ್ ಬೇಕಿತ್ತು. ಈ ವೇಳೆ ಎಂಎಸ್ ಧೋನಿ 4,6,6,2,6 ರನ್ ಬಾರಿಸಿದ್ದರು. ಇನ್ನು ಕೊನೆಯ ಎಸೆತದಲ್ಲಿ ಗೆಲ್ಲಲು ಚೆನ್ನೈಗೆ 2 ರನ್ ಬೇಕಿತ್ತು. ಈ ವೇಳೆ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು. ಚೆಂಡು ಕೀಪರ್ ಕೈ ಸೇರುತ್ತಿದ್ದಂತೆ 1 ರನ್ ಪಡೆದು ಪಂದ್ಯವನ್ನು ಡ್ರಾ ಮಾಡಲು ಧೋನಿ ಮುಂದಾದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಶಾರ್ದೂಲ್ ಠಾಕೂರ್ ಕ್ರೀಸ್ ಗೆ ಬರುವ ಮುನ್ನವೇ ಪಾರ್ಥಿವ್ ರನೌಟ್ ಮಾಡಿದರು. ಇದರೊಂದಿಗೆ ಆರ್ಸಿಬಿ ತಂಡ 1 ರನ್ ನಿಂದ ರೋಚಕ ಗೆಲುವು ಪಡೆಯಿತು.