ಪುಲ್ವಾಮ ಉಗ್ರ ದಾಳಿ ಬಳಿಕ ಇಂಡೋ-ಪಾಕ್ ಕ್ರಿಕೆಟ್ ಸಂಪೂರ್ಣ ಸ್ಥಗಿತವಾಗುವ ಭೀತಿ ಎದುರಾಗಿದ್ದು, ದ್ವಿಪಕ್ಷೀಯ ಸರಣಿ ಬಿಡಿ, ವಿಶ್ವಕಪ್ ಸರಣಿಯಲ್ಲೂ ಸಾಂಪ್ರದಾಯಿಕ ಬದ್ಧ ವೈರಿಗಳ ಕದನದ ಮೇಲೆ ಕಾರ್ಮೋಡ ಕವಿದಿದೆ. ಪಾಕಿಸ್ತಾನ ತನ್ನ ಕೈಯ್ಯಾರೆ ತಾನೇ ತನ್ನ ಭವಿಷ್ಯದ ಮೇಲೆ ಕಾರ್ಮೋಡ ಎಳೆದುಕೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವುದು ಬೇಡ ಎಂದು ನಿರ್ಧರಿಸಿದರೆ ಖಂಡಿತಾ ತಾನು ಆ ದೇಶದ ತಂಡದ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.