ಕಳೆದ ಫ್ರೆಬ್ರವರಿ 14ರಂದು ಪುಲ್ವಾಮ ಸಮೀಪ ಕರ್ತವ್ಯ ನಿಯೋಜನೆಗೆ ತೆರಳುತ್ತಿದ್ದ ಭಾರತೀಯ ಸೇನೆಯ ಸೇನಾ ವಾಹನಗಳ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ ಸುಮಾರು 44 ಯೋಧರನ್ನು ಕೊಂದು ಹಾಕಲಾಗಿತ್ತು. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನದ ನಡೆಯನ್ನು ಭಾರತ ಟೀಕಿಸಿದ್ದು, ಇತ್ತೀಚೆಗೆ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲೂ ಪುಲ್ವಾಮ ಉಗ್ರ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು.