ಬೆಂಗಳೂರು: 20 ವರ್ಷದ ಡಿಪ್ಲಮಾ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಪೊಲೀಸರು ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ.
ಶ್ರೀನಗರದ ಯಶವಂತ್(19), ಶ್ರೀನಿವಾಸ್(19), ಕಸ್ತೂರ್ ಬಾ ನಗರದ ಸುಮಾರ್(19) ಶೇಖರ್ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಿಇಎಸ್ ಕಾಲೇಜಿನಲ್ಲಿ ಎರಡನೇ ವರ್ಷದ ಡಿಪ್ಲಮಾ ವ್ಯಾಸಂಗ ಮಾಡುತ್ತಿದ್ದ ಹರ್ಷ ಎಂಬಾತನಿಗೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಬನಶಂಕರಿಯ ಪಿಇಎಸ್ ಕಾಲೇಜಿನ ಬಳಿ ಚಾಕುವಿನಿಂದ ಇರಿಯಲಾಗಿತ್ತು. ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.
ಮೊಬೈಲ್ ವಿಚಾರವಾಗಿ ಪ್ರಮುಖ ಆರೋಪಿಯಾಗಿರು ಶೇಖರ್ ಡಿಸೆಂಬರ್ 19 ರಂದು ಹರ್ಷನ ಜೊತೆ ಜಗಳ ಮಾಡಿಕೊಂಡಿದ್ದ. ಶೇಖರ್ ಮತ್ತು ಆತನ ಸ್ನೇಹಿತರು ಹರ್ಷನ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದರು.
ಕಾನೂನು ತೊಡಕಬಹುದೆಂದು ಕೆಲಸ ಆಸ್ಪತ್ರೆಗಳು ಹರ್ಷನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದವು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Advertisement