ಬೆಂಗಳೂರು: ನೆಲಮಂಗಲದ ಅರಿಶಿಣಕುಂಟೆ ಬಳಿ ಸೋಮವಾರ ಬಸ್ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ ಗಾಯಗೊಂಡಿದ್ದ ಹಾಸನ ಜಿಲ್ಲೆ ವೀರಾಪುರ ಗ್ರಾಮದ ಮಮತಾ ಚಿಕಿತ್ಸೆ ಫಲಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಶೃಂಗೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ನಲ್ಲಿ 12.10ಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಭಾಗ್ಯಮ್ಮ (56) ಎಂಬವರು ಸಜೀವದಹನವಾಗಿದ್ದರು.
ಮಮತಾ ಅವರಿಗೆ ಶೇ 80 ರಷ್ಟು ಸುಟ್ಟ ಗಾಯಗಳಾಗಿದ್ದವು. ಘಟನೆಯಲ್ಲಿ ಅವರ ಪುತ್ರ ಯಶವಂತ್ (5), ಗಂಡಸಿಯ ದಿನೇಶ್ (45) ಮತ್ತು ಶೃಂಗೇರಿಯ ಪದ್ಮನಾಭಶಾಸ್ತ್ರಿ (37) ಎಂಬುವರೂ ಗಾಯಗೊಂಡಿದ್ದರು.
ಇನ್ನೂ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು. ಶವ ಸಂಸ್ಕಾರಕ್ಕೆ 15 ಸಾವಿರ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
Advertisement