ಇದರ ಪರಿಣಾಮ ವದಂತಿ ಹೆಚ್ಚಾಗಿ ಹಬ್ಬಿದ ಪ್ರದೇಶಗಳ ಜನ ರಾತ್ರಿಯಿಡೀ ದೊಡ್ಡ ದೊಡ್ಡ ಕೋಲು, ದೊಣ್ಣೆಗಳನ್ನು ಹಿಡಿದು ಗ್ರಾಮಗಳನ್ನು ಕಾಯುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದಂತೆ ಪೊಲೀಸರು ಮನವಿ ಮಾಡಿಕೊಂಡರೂ ಇದನ್ನು ಜನರು ನಂಬುತ್ತಿಲ್ಲ. ಕೆಜಿಎಫ್ ಬಳಿ ಬಿಹಾರ ಹಾಗೂ ಶಿವಮೊಗ್ಗದ ನಿವಾಸಿಗಳಾದ ಇಬ್ಬರು ವ್ಯಕ್ತಿಗಳನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಬಳಿಕ ಪೊಲೀಸರು ಮಧ್ಯಪ್ರವೇಶ ಮಾಡಿ ಥಳಿತಕ್ಕೊಳಗಾಗಿದ್ದ ವ್ಯಕ್ತಿಗಳನ್ನು ರಕ್ಷಣೆ ಮಾಡಿದ್ದಾರೆ.