ದಶಕಗಳಿಂದಲೂ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಈ ವರ್ಷ ಕೊಂಚ ರಿಲೀಫ್ ಸಿಕ್ಕಂತೆ ಕಾಣುತ್ತಿದೆ. ಕಾರಣ ಕೇರಳ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕರ್ನಾಟಕದ ಕೆಆರ್ ಎಸ್ ಮತ್ತು ಕಬಿನಿ ಡ್ಯಾಂಗಳಿಗೆ ಉತ್ತಮ ಪ್ರಮಾಣದ ನೀರಿನ ಹರಿವಿದೆ. ಇದೇ ಕಾರಣಕ್ಕೆ 34 ವರ್ಷಗಳ ಬಳಿಕ ತಮಿಳುನಾಡಿಗೆ ಕಬಿನಿ ಡ್ಯಾಂ ನಿಂದ ಸುಮಾರು 176 ಟಿಎಂಸಿ ನೀರು ಬಿಡಲಾಗುತ್ತಿದ್ದು, ಕೆಆಎರ್ ಎಸ್ ನಿಂದ ಸುಮಾರು 163 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ.