ಸಾಲ ಮರುಪಾವತಿಸಲು ಅಪಾರ ಬಡ್ಡಿ ತೆಗೆದುಕೊಳ್ಳುತ್ತಿರುವ, ರೈತರಿಗೆ ಕಿರುಕುಳ ನೀಡುತ್ತಿರುವ ಯಾವುದೇ ಬಗೆಯ ದೂರುಗಳನ್ನು ನಿರ್ಲಕ್ಷಿಸಬಾರದು. ಇಂತಹ ಪ್ರಕರಣಗಳ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಬೇಕು. ದೂರು ದಾಖಲಿಸಿದ ಬಳಿಕ ಸಾಲ ನೀಡಿದವರು ಹೆಚ್ಚು ಬಡ್ಡಿ ಪಡೆಯುತ್ತಿದ್ದಾರೆಯೇ ಹಾಗೂ ಇನ್ನಿತರೆ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಲೇಬೇಕು. ಈ ಕುರಿತು ಎಲ್ಲಾ ಜಿಲ್ಲೆಗಳಲ್ಲೂ 24 ಗಂಟೆಗಳ ಸಹಾಯವಾಣಿಯನ್ನು ತೆರೆಯಬೇಕು. ಸಹಾಯವಾಣಿ ಕೇಂದ್ರದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರ್ಯಾಂಕ್ ನ ಅಧಿಕಾರಿಯೊಬ್ಬರು ಇರಬೇಕು.