ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಾಲಕೃಷ್ಣ ಅವರಿಗೆ ಉನ್ನತ ಸಾಂವಿಧಾನಿಕ ಹುದ್ದೆ ಆಮಿಷ ನೀಡಲಾಗಿದ್ದು, ಅದರಂತೆ, ಮೋದಿಯವರ ಸೂಚನೆಯಂತೆ ಪ್ರತಿಕಾರದ ದಾಳಿಗಳು ನಡೆಯುತ್ತಿವೆ. ಚುನಾವಣೆ ವೇಳೆ, ಆಡಳಿತ ಯಂತ್ರ ಹಾಗೂ ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಳ್ಳುವುದರ ಮೂಲಕ ವಿರೋಧಿಗಳನ್ನು ಹಣೆಯಲು ಪ್ರಯತ್ನಿಸುತ್ತಿರುವುದು ಶೋಚನೀಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.