ಕೆಜಿ ಹಳ್ಳಿ ಹಿಂಸಾಚಾರ
ಕೆಜಿ ಹಳ್ಳಿ ಹಿಂಸಾಚಾರ

ಕೆ. ಜಿ. ಹಳ್ಳಿ ಗಲಭೆ: ಮತ್ತೋರ್ವ ಆರೋಪಿ ಸಾವು, ಕೋವಿಡ್ ದೃಢ

ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ  ಆರೋಪಿ ಮೃತಪಟ್ಟಿದ್ದು, ಆತನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಗಲಭೆಗೆ ಸಂಬಂಧಿಸಿ ಮೃತಪಟ್ಟವರ ಸಂಖ್ಯೆ 4‌ಕ್ಕೆ ಏರಿಕೆ ಆಗಿದೆ.

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ  ಆರೋಪಿ ಮೃತಪಟ್ಟಿದ್ದು, ಆತನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಗಲಭೆಗೆ ಸಂಬಂಧಿಸಿ ಮೃತಪಟ್ಟವರ ಸಂಖ್ಯೆ 4‌ಕ್ಕೆ ಏರಿಕೆ ಆಗಿದೆ.

24 ವರ್ಷದ ಸಯ್ಯದ್ ನದೀಮ್ ಮೃತಪಟ್ಟ ಆರೋಪಿ. ಈತ ಕೆಜಿ ಹಳ್ಳಿ,  ಡಿಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಯಾಗಿದ್ದರಿಂದ 12ನೇ ತಾರೀಖಿನಿಂದು ಬೆಳಿಗ್ಗೆ ಬಂಧಿಸಲಾಯಿತ್ತು. ನಂತರ  ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ನಂತರ ಆತನಿಗೆ ಎದೆ ನೋವು, ಹೊಟ್ಟೆ ನೋವು ಮತ್ತು ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯವಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Related Stories

No stories found.

Advertisement

X
Kannada Prabha
www.kannadaprabha.com