ತೆರಿಗೆ ವಿವಾದ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬಿತ್ತು ಬೀಗ..!; ಗೌರವ್ ಗುಪ್ತಾ ಹೇಳಿದ್ದೇನು?

ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ  ಮತ್ತೆ ಬೀಗ ಬಿದ್ದಿದೆ.
ಮಂತ್ರಿ ಮಾಲ್ ಗೆ ಬೀಗ
ಮಂತ್ರಿ ಮಾಲ್ ಗೆ ಬೀಗ
Updated on

ಬೆಂಗಳೂರು: ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ  ಮತ್ತೆ ಬೀಗ ಬಿದ್ದಿದೆ.

ಹೌದು.. ತೆರಿಗೆ ಕಟ್ಟದ ಆರೋಪ ಎದುರಿಸುತ್ತಿರುವ ನಗರದ ಪ್ರತಿಷ್ಠಿತ ಮಂತ್ರಿಮಾಲ್​ಗೆ ಮತ್ತೆ ಬಿಬಿಎಂಪಿ ಬೀಗ ಜಡಿದಿದೆ. 27 ಕೋಟಿ ರೂಪಾಯಿ ತೆರಿಗೆಯನ್ನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಅಧಿಕಾರಿಗಳಿಂದ ಮಂತ್ರಿಮಾಲ್​ಗೆ ಬೀಗ ಹಾಕಿದ್ದಾರೆ.

ಮೂರು ವರ್ಷಗಳ ಅವಧಿಯಲ್ಲಿ ಮಂತ್ರಿಮಾಲ್​ 36 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನ ಕಟ್ಟಬೇಕಿತ್ತು. ಹೀಗಾಗಿ ಕಳೆದ ಅಕ್ಟೋಬರ್​ನಲ್ಲಿ ಬೀಗ ಕೂಡ ಜಡಿಯಲಾಗಿತ್ತು. ಈ ಸಂದರ್ಭದಲ್ಲಿ 5 ಕೋಟಿ ಹಣವನ್ನ ಮಂತ್ರಿಮಾಲ್ ನೀಡಿತ್ತು. 

ಅಕ್ಟೋಬರ್ 31ರ ಬಳಿಕ ಹಲವು ಬಾರಿ ನೋಟಿಸ್ ನೀಡಿದ್ದರೂ ಉಳಿದ ಹಣವನ್ನ ಮಂತ್ರಿಮಾಲ್ ನೀಡಿರಲಿಲ್ಲ ಎನ್ನಲಾಗಿದೆ. ಅಕ್ಟೋಬರ್ ಮುಗಿದರೂ ತೆರಿಗೆ ಕಟ್ಟದಿದ್ದರಿಂದ ನವೆಂಬರ್ 15ರಂದು ಮತ್ತೆ ಬೀಗ ಹಾಕಲು ಮುಂದಾಗಿತ್ತು. ನವೆಂಬರ್ 15ರಂದು ಮಂತ್ರಿಮಾಲ್​ಗೆ 15 ದಿನಗಳ ಕಾಲಾವಕಾಶವನ್ನ ಪಾಲಿಕೆ ಕೊಟ್ಟಿತ್ತು. ಆದರೂ ತೆರಿಗೆ ಕಟ್ಟದ ಹಿನ್ನಲೆಯಲ್ಲಿ ಇಂದು ಮಾಲ್ ಗೆ ಬೀಗ ಜಡಿಯಲಾಗಿದೆ.

2 ಬಾರಿ ನೋಟಿಸ್ ನೀಡಿದ್ದೇವೆ., ಇನ್ನಾವುದೇ ನೋಟಿಸ್ ನೀಡುವ ಅವಶ್ಯಕತೆ ಇಲ್ಲ: ಗೌರವ್ ಗುಪ್ತಾ
ಇದೇ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು, 'ಈಗಾಗಲೇ ನಾವು 2 ಬಾರಿ ನೋಟಿಸ್ ನೀಡಿದ್ದೇವೆ. ಇನ್ನು ಯಾವುದೇ ಅವಕಾಶ ಕೊಡುವ ಅವಶ್ಯಕತೆ ಇಲ್ಲ. ಮಾಲ್ ಗೆ ಉಳಿದ ತೆರಿಗೆ ಕಟ್ಟದಿದ್ದರೆ ಬಹಳ ಕಠಿಣ ಕ್ರಮವನ್ನು ನಾವು ಜರುಗಿಸಲು ಸಿದ್ಧರಿದ್ದೇವೆ. ಈ ವಿಷಯದಲ್ಲಿ ಯಾವುದೇ ದಯೆ, ಕರುಣೆ ಇಲ್ಲ, ಅದರ ವಿಚಾರವಾಗಿ ಇಂದು ಬೆಳಿಗ್ಗೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com