ಸಾರ್ವಜನಿಕವಾಗಿ ಹಾವಿನ ಪ್ರದರ್ಶನ: ಸದ್ಗುರು ವಿರುದ್ಧ ದೂರು ದಾಖಲು

ಸಾರ್ವಜನಿಕವಾಗಿ ಹಾವಿನ ಪ್ರದರ್ಶನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಧಾರ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ವಿರುದ್ಧ ದೂರು ದಾಖಲಾಗಿದೆ.
ಜಗ್ಗಿ ವಾಸುದೇವ್
ಜಗ್ಗಿ ವಾಸುದೇವ್
Updated on

ಬೆಂಗಳೂರು: ಸಾರ್ವಜನಿಕವಾಗಿ ಹಾವಿನ ಪ್ರದರ್ಶನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಧಾರ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ವಿರುದ್ಧ ದೂರು ದಾಖಲಾಗಿದೆ.

ಹಾವಿನ ಅಕ್ರಮ ಸಾಗಣೆ ಮಾಡಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ (ಎಸ್‌ಪಿಸಿಎ) ಸದಸ್ಯರು ಶನಿವಾರ ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ವೇಳಾಪಟ್ಟಿ-2 ರ ಅಡಿಯಲ್ಲಿ ಹಾವು ಪಟ್ಟಿಮಾಡಲಾಗಿದ್ದು, ಇದರಡಿಯಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 9 ಮತ್ತು 10 ರಂದು ಸದ್ಗುರುಗಳು ಹಾವನ್ನು ಪ್ರದರ್ಶಿಸಿದ್ದು, ಈ ಉರಗವನ್ನು ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿಲ್ಲ ಎಂದು ಸದಸ್ಯರು ದೂರಿನಲ್ಲಿ ಆರೋಪಿಸಿದ್ದಾರೆ. SPCA ಮಂಡಳಿಯ ಸದಸ್ಯ ಪೃಥ್ವಿ ರಾಜ್ ಸಿಎನ್ ಅವರು ದೂರು ದಾಖಲಿಸಿದ್ದು, ದೂರು ಸದ್ಗುರುಗಳ ವಿರುದ್ಧ ಅಲ್ಲ, ಆದರೆ ಅವರು ಅನೇಕ ಅನುಯಾಯಿಗಳನ್ನು ಹೊಂದಿರುವುದರಿಂದ ಅವರು ಜವಾಬ್ದಾರರಾಗಿರಬೇಕು ಮತ್ತು ಇತರರು ಅದೇ ರೀತಿ ಮಾಡಲು ಸ್ಫೂರ್ತಿಯಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಡಿಸಿಎಫ್ ರಮೇಶ್ ಬಿಆರ್, ತನಿಖೆ ಆರಂಭಿಸಲಾಗಿದೆ. ಕೆಲವು ಛಾಯಾಚಿತ್ರಗಳು ಇಲಾಖೆಗೆ ತಲುಪಿದ್ದು, ತನಿಖೆ ನಡೆಸಿದಾಗ ಕೊಯಮತ್ತೂರಿನಿಂದ ಬಂದದ್ದು ಎಂದು ಅವರು ಹೇಳಿದರು. ಬೇಕಿದ್ದರೆ ಸದ್ಗುರುಗಳನ್ನೂ ಕರೆಸಿ ವಿವರಣೆ ನೀಡಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com