ಬೆಂಗಳೂರು: 75 ಲಕ್ಷ ರೂಪಾಯಿ ನಗದು ಸಹಿತ ಮಾಲೀಕನ ದುಬಾರಿ ಕಾರಿನೊಂದಿಗೆ ಪರಾರಿಯಾಗಿದ್ದ ಉದ್ಯಮಿಯ ಕಾರು ಚಾಲಕನನ್ನು ಬ್ಯಾಟರಾಯನಪುರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ವಿ.ಸಂತೋಷ್ ಕುಮಾರ್ (34) ಬಂಧಿತ ಆರೋಪಿಯಾಗಿದ್ದಾನೆ. ಉದ್ಯಮಿ ಪಿ ಹರೀಶ್ ಅವರು ಹೈದರಾಬಾದ್ನಲ್ಲಿರುವ ತಮ್ಮ ಫ್ಲಾಟ್ ಅನ್ನು ಮಾರಿ ಕಾರಿನಲ್ಲಿ ಹಣವನ್ನು ಸಾಗಿಸುತ್ತಿದ್ದರು. ಪಾರ್ಟಿಯೊಂದಕ್ಕೆ ಆರೋಪಿ ವಿ.ಸಂತೋಷ್ ಕುಮಾರ್ ಜೊತೆಗೆ ಹೋಗಿದ್ದ ಹರೀಶ್, ಕಾರಿನಲ್ಲಿ ಮನೆಗೆ ಹಿಂತಿರುತ್ತಿದ್ದರು.
ಈ ವೇಳೆ ದಾರಿ ಮಧ್ಯೆ ಸಿಗರೇಟ್ ತೆಗೆದುಕೊಳ್ಳಬೇಕು ಕಾರು ನಿಲ್ಲಿಸು ಎಂದು ಸಂತೋಷ್'ಗೆ ಹೇಳಿದ್ದಾರೆ. ಸಿಗರೇಟ್ ತೆಗೆದುಕೊಂಡು ಬರುವಷ್ಟರಲ್ಲಿ ಚಾಲಕ ಹಣ ಹಾಗೂ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ರೂ.72 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಮೂಲದ ಸಂತೋಷ್ ಕುಮಾರ್, ಸೆ.19ರಂದು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಎಸ್ ಯುವಿ ಮತ್ತು ನಗದು ಸಮೇತ ಪರಾರಿಯಾಗಿದ್ದ.
Advertisement