ವಕ್ಫ್ ಪ್ರಕರಣಗಳ ಪರ ವಾದಮಂಡನೆಗೆ ಹೆಸರಾಂತ ವಕೀಲರು ನೇಮಕ!

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿರುವ ವಕ್ಫ್ ಬೋರ್ಡ್ ಪ್ರಕರಣಗಳ ಪರ ವಾದಮಂಡನೆಗೆ ರಾಜ್ಯದ ಹೆಸರಾಂತ ವಕೀಲರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಕ್ಫ್​ ಬೋರ್ಡ್ ಅಧ್ಯಕ್ಷ ಶಫಿ ಸಅದಿ (ಸಂಗ್ರಹ ಚಿತ್ರ)
ವಕ್ಫ್​ ಬೋರ್ಡ್ ಅಧ್ಯಕ್ಷ ಶಫಿ ಸಅದಿ (ಸಂಗ್ರಹ ಚಿತ್ರ)
Updated on

ಮಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿರುವ ವಕ್ಫ್ ಬೋರ್ಡ್ ಪ್ರಕರಣಗಳ ಪರ ವಾದಮಂಡನೆಗೆ ರಾಜ್ಯದ ಹೆಸರಾಂತ ವಕೀಲರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

‘ಪ್ರಬಲ ವ್ಯಕ್ತಿಗಳು’ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ವಕ್ಫ್ ಮಂಡಳಿಯು ಖ್ಯಾತ ವಕೀಲರನ್ನು ನ್ಯಾಯಾಲಯದಲ್ಲಿ ಹೋರಾಟಕ್ಕೆ ತೊಡಗಿಸಿಕೊಂಡಿದೆ ಎಂದು ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಸೋಮವಾರ ಹೇಳಿದ್ದಾರೆ.

ಸಅದಿ ಅವರು ಅಧ್ಯಕ್ಷರಾದ ನಂತರ, ವಕ್ಫ್ ಆಸ್ತಿಗಳ ಅತಿಕ್ರಮಣಕ್ಕೆ ಅದರ ಕಾನೂನು ಕೋಶದ ವೈಫಲ್ಯವು ಒಂದು ಕಾರಣ ಎಂದು ಕಂಡುಬಂದಿದೆ. ಏಕೆಂದರೆ ಸಮಿತಿಯಲ್ಲಿರುವ ವಕೀಲರು ಮಂಡಳಿಯ ಪ್ರಕರಣಗಳ ವಿರುದ್ಧ ಹೋರಾಡಲು ಆದ್ಯತೆ ನೀಡಲಿಲ್ಲ. ಕಳೆದ ವಕ್ಫ್ ಬೋರ್ಡ್ ಸಭೆಯಲ್ಲಿ, ಹಿರಿಯ ವಕೀಲರನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಸಅದಿ ಹೇಳಿದರು. 

ಅದರಂತೆ ಮಂಡಳಿಯ ಪರವಾಗಿ ಹಿರಿಯ ವಕೀಲರಾದ ಡಿ.ಎಲ್.ಎನ್.ರಾವ್, ಅಶೋಕ್ ಹಾರ್ನಹಳ್ಳಿ, ಜಯಕುಮಾರ್ ಪಾಟೀಲ್ ಮತ್ತಿತರರು ಹೋರಾಟಕ್ಕೆ ತೊಡಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಅಂತೆಯೇ  ರಾವ್ ಅವರಿಗೆ ವಿಂಡ್ಸರ್ ಮ್ಯಾನರ್ ಆಸ್ತಿ ಪ್ರಕರಣ ಸೇರಿದಂತೆ ಮೂರು ಪ್ರಕರಣಗಳನ್ನು ಹಸ್ತಾಂತರಿಸಲಾಗಿದೆ. ವಕ್ಫ್ ಬೋರ್ಡ್ ಶೇಕಡಾ 50 ರಷ್ಟು ಪ್ರಕರಣಗಳನ್ನು ಗೆದ್ದರೂ, ಅದು ನಡೆಸಲು ಸರ್ಕಾರದ ಹಣವನ್ನು ಅವಲಂಬಿಸಬೇಕಾಗಿಲ್ಲ. ಅಲ್ಲದೆ ಮಂಡಳಿಯು ಕಾಂಪೌಂಡ್ ಗೋಡೆಗಳನ್ನು ನಿರ್ಮಿಸುವ ಮೂಲಕ ಪುನಃ ಪಡೆದ ಆಸ್ತಿಗಳನ್ನು ರಕ್ಷಿಸಲು 70 ಕೋಟಿ ರೂ. ಮೀಸಲಿರಿಸಲಿದೆ ಎಂದು ಅವರು ಹೇಳಿದರು.

ವಕ್ಫ್ ಬೋರ್ಡ್ ಭೂ ಒತ್ತುವರಿ ಕುರಿತು ಅನ್ವರ್ ಮಾಣಿಪ್ಪಾಡಿ ವರದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಅದಿ ಅವರು, ಸಿಬಿಐ ಅಥವಾ ಲೋಕಾಯುಕ್ತ ಸೇರಿದಂತೆ ಯಾವುದೇ ತನಿಖೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಇದಲ್ಲದೆ, ಮಾಣಿಪ್ಪಾಡಿ ವರದಿಯಲ್ಲಿ ವರದಿಯಾಗಿರುವುದಕ್ಕಿಂತ ವಾಸ್ತವಿಕವಾಗಿ ಅತಿಕ್ರಮಣಗೊಂಡಿರುವ ಭೂಮಿಯ ಪ್ರಮಾಣ ಹೆಚ್ಚು ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com