ಬೆಂಗಳೂರು: ಮೃತದೇಹ ಪತ್ತೆಯಾದ ಎರಡು ತಾಸಿನಲ್ಲೇ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಕೊಲೆ ಪ್ರಕರಣ ವರದಿಯಾದ ಎರಡು ಗಂಟೆಗಳಲ್ಲಿಯೇ ಹೆಣ್ಣೂರು ಪೊಲೀಸರು ಭೇದಿಸಿದ್ದು, ಅಪ್ರಾಪ್ತ ವಯಸ್ಕ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಕೊಲೆ ಪ್ರಕರಣ ವರದಿಯಾದ ಎರಡು ಗಂಟೆಗಳಲ್ಲಿಯೇ ಹೆಣ್ಣೂರು ಪೊಲೀಸರು ಭೇದಿಸಿದ್ದು, ಅಪ್ರಾಪ್ತ ವಯಸ್ಕ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ರಾಜಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿತ್ತು. ಮೃತನನ್ನು ನೇಪಾಳ ಮೂಲದ ಧನ ಸಿಂಗ್ (23) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ಥ ಬಾಬುಸಾಪಾಳ್ಯದ ಪಿಜಿ ವಸತಿಗೃಹದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಿಂತ ದೊಡ್ಡವನಾಗಿದ್ದ ಧನ ಸಿಂಗ್ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ ನೇಪಾಳ ಮೂಲದ ಆರೋಪಿಗಳು ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ನವೆಂಬರ್ 30 ರ ರಾತ್ರಿ ಕುಡಿದ ಅಮಲಿನಲ್ಲಿದ್ದ ಸಿಂಗ್ ಆರೋಪಿಗಳನ್ನು ಕೂಗಲು ಪ್ರಾರಂಭಿಸಿದನು. ಯೋಜನೆಯ ಪ್ರಕಾರ, ಮೂವರು ರಾಜಕಾಲುವೆ ಬಳಿ ಹೋದರು ಮತ್ತು ಇನ್ನಿಬ್ಬರು ಸಿಗರೇಟ್ ಖರೀದಿಸುವ ನೆಪದಲ್ಲಿ ಆತನನ್ನು ಹೊರಗೆ ಕರೆತಂದರು. ಸ್ಥಳಕ್ಕಾಗಮಿಸಿದ ಅವರು ಬೆಲ್ಟ್‌ನಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com