social_icon

ಕೊಡಗು: ಸಾಕಾನೆ ದಾಳಿಗೆ ಸ್ಥಳೀಯ ನಿವಾಸಿ ಸಾವು

ಸಾಕಾನೆ ದಾಳಿಗೆ ಸ್ಥಳೀಯ ನಿವಾಸಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

Published: 29th September 2022 05:25 PM  |   Last Updated: 29th September 2022 05:25 PM   |  A+A-


Daily wager killed in a tamed elephant attack

ಆನೆ ದಾಳಿಗೆ ಬಲಿಯಾದ ಬಸಪ್ಪ

Posted By : srinivasamurthy
Source : The New Indian Express

ಕೊಡಗು: ಸಾಕಾನೆ ದಾಳಿಗೆ ಸ್ಥಳೀಯ ನಿವಾಸಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಕುಶಾಲನಗರದ ದುಬಾರೆ ಹಾಡಿಯಲ್ಲಿ ಸಾಕಾನೆಯೊಂದರ ದಾಳಿಗೆ ಸಿಲುಕಿ ಹಾಡಿ ನಿವಾಸಿ ಬಸಪ್ಪ (28) ಎಂಬುವವರು ಮೃತಪಟ್ಟಿದ್ದಾರೆ. ಮನೆಯಿಂದ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ. ಸ್ಥಳಕ್ಕೆ ತೆರಳಿದ ಮಾವುತನ ಮೇಲೂ ಆನೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಬಸಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ‌ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಬಹಿರ್ದೆಸೆಗೆ ತೆರಳುತ್ತಿದ್ದಾಗ ದಾಳಿ
ದುಬಾರೆ ಆನೆ ಶಿಬಿರದ ಪಳಗಿದ ಆನೆ ನಂಜುಂಡ (ಅಂದಾಜು 42 ವರ್ಷ) ಜೇನುಕುರುಬರ ಹಾಡಿ ನಿವಾಸಿ ಬಸಪ್ಪನ ಮೇಲೆ ದಾಳಿ ನಡೆಸಿ ನಂತರದ ಬಸಪ್ಪನನ್ನು ಕೊಂದಿದೆ. ಬುಧವಾರ ಬೆಳಗ್ಗೆ 7.45ರ ಸುಮಾರಿಗೆ ದುಬಾರೆ ಸಮೀಪದ ಬುಡಕಟ್ಟು ಬಡಾವಣೆಯ ಜೇನುಕುರುಬರ ಬಸಪ್ಪ (24) ಎಂಬಾತ ಮತ್ತೊಬ್ಬ ವ್ಯಕ್ತಿ ರವಿ ಎಂಬಾತನ ಜತೆ ಕಾಡಿನ ಕಡೆಗೆ ಹೊರಟಿದ್ದ. ಬುಡಕಟ್ಟು ಜನಾಂಗದವರಿಗೆ ಶೌಚಾಲಯದ ಕೊರತೆಯ ಕಾರಣ, ಇಬ್ಬರು ಮಲವಿಸರ್ಜನೆಗೆ ಅರಣ್ಯದ ಅಂಚಿಗೆ ಹೋಗಿದ್ದಾರೆ. ಆದರೆ, ಕಾಡಿನಲ್ಲಿ ಮೇಯುತ್ತಿದ್ದ ನಂಜುಂಡ ಎಂಬ ಪಳಗಿದ ಆನೆ ಇಬ್ಬರ ಮೇಲೆ ದಾಳಿ ಮಾಡಿದೆ. ತುಳಿತಕ್ಕೆ ಒಳಗಾಗಿಯೂ ನೆಲಕ್ಕೆ ಬಿದ್ದ ಬಸಪ್ಪನನ್ನು ನಂಜುಂಡ ಅಟ್ಟಿಸಿಕೊಂಡು ಹೋಗಿದ್ದಾನೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ: 'ಪರಿಹಾರ ತಗೊಳ್ಳಿ, ಸಾಯಲು ರೆಡಿಯಾಗಿ': ಆನೆ ನಿಯಂತ್ರಣದಲ್ಲಿ ವೈಫಲ್ಯ ಕುರಿತು ಶಾಸಕ ಎಂಪಿ ಕುಮಾರಸ್ವಾಮಿ ಅಸಮಾಧಾನ

ಬಸಪ್ಪ ಅವರ ಎದೆಗೆ ಗಂಭೀರ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ  ಬಸಪ್ಪನನ್ನು ಸಿದ್ದಾಪುರ ಆಸ್ಪತ್ರೆಗೆ ರವಾನಿಸಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ದುಬಾರೆ ವಿಭಾಗದ ಆರ್‌ಎಫ್‌ಒ ಶಿವರಾಮ್‌ ಅವರು, 'ಪಳಗಿದ ಆನೆಗಳನ್ನು ರಾತ್ರಿ ಸಮಯದಲ್ಲಿ ಕಾಡಿನಲ್ಲಿ ಮೇಯಲು ಬಿಡಲಾಗುತ್ತದೆ ಮತ್ತು ಬೆಳಗಿನ ಸಮಯದಲ್ಲಿ ಅವುಗಳನ್ನು ಮರಳಿ ಶಿಬಿರಕ್ಕೆ ಕರೆತರಲಾಗುತ್ತದೆ. ಆನೆ ಕಾಡಿನಲ್ಲಿ ಮೇಯುತ್ತಿದ್ದಾಗ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

ಇಲಾಖೆ ವಿರುದ್ಧ ಆಕ್ರೋಶ
ಗಿರಿಜನರ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯವೇ ಈ ದುರಂತ ಘಟನೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಬಡಾವಣೆಯಲ್ಲಿ ಶೌಚಾಲಯದ ಕೊರತೆ ಇದ್ದು, ನಿತ್ಯ ಬಯಲು ಶೌಚ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಂತ್ರಸ್ತ ಬಸಪ್ಪ ಕುಟುಂಬ ಅಳಲು ತೋಡಿಕೊಂಡಿದೆ. ಎಂದಿನಂತೆ, ಬಹಿರ್ದೆಸೆಗಾಗಿ ಬಸಪ್ಪ ಮನೆಯಿಂದ ಕಾಡಿಗೆ ಹೋದರು, ಆದರೆ ಆನೆಯಿಂದ ಕೊಲ್ಲಲ್ಪಟ್ಟರು. ಬಸಪ್ಪ ಅವರು ಪತ್ನಿ ಹಾಗೂ ಆರು ತಿಂಗಳ ಮಗು ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ: ವೈರಲ್ ವಿಡಿಯೋ: ಪ್ರವಾಸಿಗರ ಹೊಣೆಗೇಡಿತನ: ಆಹಾರವೆಂದು ಪ್ಲಾಸ್ಟಿಕ್ ತಿಂದ ಆನೆ!!

ಕೊಡಗಿನ ಬುಡಕಟ್ಟು ಜನಾಂಗದವರ ದಯನೀಯ ಜೀವನ ಪರಿಸ್ಥಿತಿಯನ್ನು ಎತ್ತಿ ತೋರಿಸುವ ಹಲವಾರು ವರದಿಗಳು ಪ್ರಕಟವಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಪರಿಹರಿಸದಿರುವುದು ಈ ದುರಂತ ಘಟನೆಗೆ ಕಾರಣವಾಗಿದೆ ಎಂದು ಕುಶಾಲನಗರ ನಿವಾಸಿ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದು, ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp