ರಸ್ತೆ ಬದಿಗಳಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ 930 ಕಡೆಗಳಲ್ಲಿ ತೆರವು, ಸ್ವಚ್ಛಗೊಳಿಸಿದ ಬಿಬಿಎಂಪಿ

ಬಿಬಿಎಂಪಿಯ ಈ ಉಪಕ್ರಮವನ್ನು ಬಿಪಿಎಸಿ ವ್ಯವಸ್ಥಾಪಕ ಟ್ರಸ್ಟಿ, ಸಿಇಒ ರೇವತಿ ಅಶೋಕ್ ಶ್ಲಾಘಿಸಿದರು. ಅದೇ ವೇಳೆ ಸಿಬ್ಬಂದಿ ಕೊರತೆ ಮತ್ತು ಬಿಬಿಎಂಪಿ ಮಾರ್ಷಲ್‌ಗಳ ರಾತ್ರಿ ಗಸ್ತು ತಿರುಗುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಶನಿವಾರ ದೊಮ್ಮಲೂರು ಮೇಲ್ಸೇತುವೆಯಿಂದ ಈಜಿಪುರವರೆಗಿನ ಪ್ರದೇಶವನ್ನು ಬಿಬಿಎಂಪಿ, ಬಿಪಿಎಸಿ. ಸ್ವಯಂಸೇವಕರ ಸಹಯೋಗದೊಂದಿಗೆ ಸ್ವಚ್ಛಗೊಳಿಸಿತು.
ಶನಿವಾರ ದೊಮ್ಮಲೂರು ಮೇಲ್ಸೇತುವೆಯಿಂದ ಈಜಿಪುರವರೆಗಿನ ಪ್ರದೇಶವನ್ನು ಬಿಬಿಎಂಪಿ, ಬಿಪಿಎಸಿ. ಸ್ವಯಂಸೇವಕರ ಸಹಯೋಗದೊಂದಿಗೆ ಸ್ವಚ್ಛಗೊಳಿಸಿತು.
Updated on

ಬೆಂಗಳೂರು: ಬಿಬಿಎಂಪಿಯ ಎಂಟು ವಲಯಗಳ 1,533 ಕಡೆಗಳಲ್ಲಿ 930 ಕಸ ಹಾಕುವ ಜಾಗಗಳನ್ನು ತೆರವುಗೊಳಿಸುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯುಎಂಎಲ್) ಯಶಸ್ವಿಯಾಗಿದೆ. ಏಪ್ರಿಲ್ 21 ರಿಂದ 6,200 ಮೆಟ್ರಿಕ್ ಟನ್ ತ್ಯಾಜ್ಯವನ್ನು ಇಂತಹ ಸ್ಥಳಗಳಿಂದ ತೆರವುಗೊಳಿಸಲಾಗಿದೆ ಮತ್ತು ಈ ಸ್ಥಳಗಳಲ್ಲಿ ಮತ್ತೆ ಕಸವನ್ನು ಹಾಕದಂತೆ ನೋಡಿಕೊಳ್ಳಲು ಕೇಳಲಾಗಿದೆ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ರಮಾಮಣಿ ಹೇಳಿದ್ದಾರೆ.

ಈ ಅಭಿಯಾನದ ಭಾಗವಾಗಿ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆಯ ಮೂಲೆಗಳಲ್ಲಿ ಮತ್ತು ಕೆಲವು ಸ್ಥಳಗಳಲ್ಲಿ ಮರಗಳಿಂದ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು (ಒಎಫ್‌ಸಿ) ತೆಗೆದುಹಾಕುವ ಕಾರ್ಯದಲ್ಲಿ ತೊಡಗಿದ್ದರು. ಇವುಗಳಿಂದ ಸಾರ್ವಜನಿಕರು, ಪಾದಚಾರಿಗಳು ಮತ್ತು ವಾಹನ ಚಾಲಕರಿಗೆ ತೊಂದರೆ ಉಂಟಾಗುತ್ತಿತ್ತು.

ಶನಿವಾರ, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿಪಿಎಸಿ) ಜೊತೆಗೂಡಿ ಬಿಬಿಎಂಪಿ, ಶಾಂತಿನಗರದ ದೊಮ್ಮಲೂರು ಫ್ಲೈಓವರ್‌ನಿಂದ ಈಜಿಪುರದವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಕಸ ಎಸೆಯುತ್ತಿದ್ದ ಪ್ರದೇಶವನ್ನು ಸ್ವಚ್ಛಗೊಳಿಸಿತು. ಅದೇ ರೀತಿ, ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ಸ್ವಯಂಸೇವಕರೊಂದಿಗೆ ಸಿವಿ ರಾಮನ್ ನಗರದ ಕಾಕ್ಸ್ ಟೌನ್ ಬಳಿಯ ಸೇಂಟ್ ಅಲೋಶಿಯಸ್ ಕಾಲೇಜು ಬಳಿಯ ಬೀದಿಯನ್ನು ಸ್ವಚ್ಛಗೊಳಿಸಿದರು.

ದೊಮ್ಮಲೂರು ಮೇಲ್ಸೇತುವೆಯಿಂದ ಈಜಿಪುರದವರೆಗಿನ ಮೂರು ತ್ಯಾಜ್ಯ ಕಾಂಪ್ಯಾಕ್ಟರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿ ಕುಮಾರ್ ತಿಳಿಸಿದ್ದಾರೆ. ಭಾನುವಾರವೂ ಸ್ವಚ್ಛತಾ ಕಾರ್ಯ ನಡೆಯಲಿದೆ.

ಶನಿವಾರ ದೊಮ್ಮಲೂರು ಮೇಲ್ಸೇತುವೆಯಿಂದ ಈಜಿಪುರವರೆಗಿನ ಪ್ರದೇಶವನ್ನು ಬಿಬಿಎಂಪಿ, ಬಿಪಿಎಸಿ. ಸ್ವಯಂಸೇವಕರ ಸಹಯೋಗದೊಂದಿಗೆ ಸ್ವಚ್ಛಗೊಳಿಸಿತು.
ಬೆಂಗಳೂರು: ರಸ್ತೆಯಲ್ಲಿ ಕಸ ಹಾಕಬೇಡಿ ಅಂದಿದ್ದಕ್ಕೆ ಪ್ರಾಧ್ಯಾಪಕನಿಗೆ ಹಿಗ್ಗಾಮುಗ್ಗ ಥಳಿತ; ಪ್ರಕರಣ ದಾಖಲು!

ಬಿಬಿಎಂಪಿಯ ಈ ಉಪಕ್ರಮವನ್ನು ಬಿಪಿಎಸಿ ವ್ಯವಸ್ಥಾಪಕ ಟ್ರಸ್ಟಿ, ಸಿಇಒ ರೇವತಿ ಅಶೋಕ್ ಶ್ಲಾಘಿಸಿದರು. ಅದೇ ವೇಳೆ ಸಿಬ್ಬಂದಿ ಕೊರತೆ ಮತ್ತು ಬಿಬಿಎಂಪಿ ಮಾರ್ಷಲ್‌ಗಳ ರಾತ್ರಿ ಗಸ್ತು ತಿರುಗುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕೇವಲ ಒಂದು ಹಂತದಲ್ಲಿ 80 ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ. ಬಿಬಿಎಂಪಿಯಲ್ಲಿ ಪೌರಕಾರ್ಮಿಕರ ಕೊರತೆಯಿದೆ. ರಾತ್ರಿ ಗಸ್ತು ಇಲ್ಲದಿರುವುದರಿಂದ ಕಸ, ನಿರ್ಮಾಣ ಅವಶೇಷಗಳು ಮತ್ತು ಇತರ ವಸ್ತುಗಳನ್ನು ಅಕ್ರಮವಾಗಿ ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ರಾತ್ರಿ ಮತ್ತು ಬೆಳಗಿನ ಜಾವ ಗಸ್ತು ತಿರುಗುವಿಕೆಯ ಅವಶ್ಯಕತೆಯಿದೆ. ಬೆಳಿಗ್ಗೆ ಮಾರ್ಷಲ್‌ಗಳು ಗಸ್ತು ತಿರುಗುವ ವೇಳೆ ಜನರು ರಸ್ತೆಬದಿಯಲ್ಲಿ ಮತ್ತು ತೆರೆದ ಸ್ಥಳಗಳಲ್ಲಿ ತ್ಯಾಜ್ಯವನ್ನು ಸುರಿಯಲು ಭಯಪಡುತ್ತಾರೆ. ಕೆಲವು ಸ್ಥಳಗಳಲ್ಲಿ ರಾತ್ರಿ 10 ಗಂಟೆಯ ನಂತರ ಮತ್ತು ಬೆಳಿಗ್ಗೆ 6 ಗಂಟೆಯ ಮೊದಲು ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಅಂತಹ ಅಪರಾಧಿಗಳನ್ನು ಹಿಡಿದು ಶಿಕ್ಷೆ ವಿಧಿಸಬೇಕು' ಎಂದು ಅವರು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com