ಬೆಂಗಳೂರು: ಫೆಬ್ರವರಿ 20ಕ್ಕೆ ನೀರಿನ ಅದಾಲತ್

ಅದಾಲತ್‌ನಲ್ಲಿ ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯಿಂದ ವಾಣಿಜ್ಯ ಬಳಕೆಗೆ ಪರಿವರ್ತನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
Bengaluru Water Crisis
ಸಂಗ್ರಹ ಚಿತ್ರ
Updated on

ಬೆಂಗಳೂರು: ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಗುರುವಾರ ಬೆಳಿಗ್ಗೆ 9.30 ರಿಂದ 11 ರವರೆಗೆ ನೀರಿನ ಅದಾಲತ್‍ ನಡೆಯಲಿದೆ.

ಅದಾಲತ್‌ನಲ್ಲಿ ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯಿಂದ ವಾಣಿಜ್ಯ ಬಳಕೆಗೆ ಪರಿವರ್ತನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ವಾಯುವ್ಯ-2 (ಸಂಪರ್ಕ ಸಂಖ್ಯೆ 28360030), ವಾಯುವ್ಯ-4 (9964216530), ಕೇಂದ್ರ-1-2 (9845444053), ಈಶಾನ್ಯ-2 (22945135), ಉತ್ತರ-1-2 (22945139), ಉತ್ತರ-2-2 (8618366506), ದಕ್ಷಿಣ-1-2 (40977432), ದಕ್ಷಿಣ-2-2 (9845444090), ನೈಋತ್ಯ-2 (9845444085), ನೈಋತ್ಯ-5 (22945198), ಪೂರ್ವ-1-3 (9535544974), ಪೂರ್ವ-2-3 (8197382595) ಗಳಲ್ಲಿ ಬೆಳಿಗ್ಗೆ 9.30 ರಿಂದ ಬೆಳಿಗ್ಗೆ 11 ರವರೆಗೆ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು.

ಇದಲ್ಲದೆ, ಸಾರ್ವಜನಿಕರು ಜಲಮಂಡಳಿಯ ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916 ಗೆ ಕರೆಮಾಡಿ ದೂರು ದಾಖಲಿಸಬಹುದು. ವಾಟ್ಸ್ ಆ್ಯಪ್ ಸಂಖ್ಯೆ– 8762228888ಗೆ ಸಂದೇಶದ ಮೂಲಕವೂ ದೂರು ಸಲ್ಲಿಸಬಹುದು ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Bengaluru Water Crisis
ಬೆಂಗಳೂರಿಗರೇ ಎಚ್ಚರ: ಕಾವೇರಿ ನೀರನ್ನು ಕುಡಿಯುವುದಕ್ಕೆ ಬಿಟ್ಟು ಬೇರೆ ಉದ್ದೇಶಗಳಿಗೆ ಬಳಸಿದರೆ 5000 ರೂ ದಂಡ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com