social_icon

ಭಾವನಾತ್ಮಕ ಆಘಾತಗಳಿಗೆ ಯೋಗ, ಧ್ಯಾನದಂತಹ ಪುನಶ್ಚೇತನಕಾರಿ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಿ...

ಯೋಗ ಮತ್ತು ಧ್ಯಾನವು ಪುರಾತನ ಪುನಶ್ಚೇತನಕಾರಿ ವಿಜ್ಞಾನಗಳಾಗಿದ್ದು, ಮನಸ್ಸು, ಆತ್ಮ ಮತ್ತು ದೇಹವನ್ನು ಸಮಗ್ರವಾಗಿ ಗುಣಪಡಿಸಲು ಚಿಕಿತ್ಸೆಯಾಗಿ ಬಳಸಬಹುದು. ದೇಹವನ್ನು ಆರೋಗ್ಯವಾಗಿಡಲು, ಮನಸ್ಸನ್ನು ಬಲಪಡಿಸಲು ಮತ್ತು ಆತ್ಮವನ್ನು ಶಾಂತಗೊಳಿಸಲು ಈ ಎರಡಕ್ಕಿಂತ ಉತ್ತಮವಾಗಿ ಬೇರೇನು ಕಾರ್ಯನಿರ್ವಹಿಸುವುದಿಲ್ಲ.

Published: 03rd January 2023 04:54 PM  |   Last Updated: 03rd January 2023 07:19 PM   |  A+A-


Representational Image

ಪ್ರಾತಿನಿಧಿಕ ಚಿತ್ರ

Posted By : Ramyashree GN
Source : Express News Service

ಯೋಗ ಮತ್ತು ಧ್ಯಾನವು ಪುರಾತನ ಪುನಶ್ಚೇತನಕಾರಿ ವಿಜ್ಞಾನಗಳಾಗಿದ್ದು, ಮನಸ್ಸು, ಆತ್ಮ ಮತ್ತು ದೇಹವನ್ನು ಸಮಗ್ರವಾಗಿ ಗುಣಪಡಿಸಲು ಚಿಕಿತ್ಸೆಯಾಗಿ ಬಳಸಬಹುದು. ದೇಹವನ್ನು ಆರೋಗ್ಯವಾಗಿಡಲು, ಮನಸ್ಸನ್ನು ಬಲಪಡಿಸಲು ಮತ್ತು ಆತ್ಮವನ್ನು ಶಾಂತಗೊಳಿಸಲು ಈ ಎರಡಕ್ಕಿಂತ ಉತ್ತಮವಾಗಿ ಬೇರೇನು ಕಾರ್ಯನಿರ್ವಹಿಸುವುದಿಲ್ಲ.

ಇದೀಗ ಎಲ್ಲೆಡೆ ಯೋಗ ಮತ್ತು ಧ್ಯಾನದ ಬಗೆಗಿನ ಮಹತ್ವ ಮತ್ತು ಆಸಕ್ತಿ ಹೆಚ್ಚುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವವರು  ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಇನ್ನೂ ಕೆಲವರು ಈ ಅಭ್ಯಾಸಗಳನ್ನು ಪ್ರಾರಂಭಿಸಲು ಇಚ್ಚಿಸುತ್ತಿದ್ದಾರೆ.

ಮನಸ್ಸಿನ ಶಾಂತಿ, ನೆಮ್ಮದಿಯ ಆತ್ಮ, ನೆಮ್ಮದಿಯ ನಿದ್ದೆ ಸೇರಿದಂತೆ ಜೀವನದಲ್ಲಿನ ಎಲ್ಲಾ ಧನಾತ್ಮಕ ವಿಚಾರಗಳಿಗೆ ಶಾಂತಿಯಿಂದಿರುವುದು ಪ್ರಮುಖ ಅಂಶವಾಗಿದೆ. ಆಘಾತಕಾರಿ ಅನುಭವಗಳನ್ನು ಹೊಂದಿರುವ ಜನರು ಯೋಗ ಮತ್ತು ಧ್ಯಾನದ ಅಭ್ಯಾಸದಿಂದ ಪ್ರಯೋಜನ ಪಡೆಯಬಹುದು. ಆಘಾತವು ಒಬ್ಬರ ವ್ಯಕ್ತಿತ್ವವನ್ನು ಬದಲಾಯಿಸಬಹುದು. ಇದು ಹಲವಾರು ನರವೈಜ್ಞಾನಿಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸದೊಂದಿಗೆ, ಇವುಗಳಿಂದ ದೂರವಿರಬಹುದು.

ಯೋಗದ ಪರಿಣಾಮ

ಆಘಾತಕಾರಿ ಅನುಭವವು ನಮ್ಮ ಮನಸ್ಸು ಮತ್ತು ದೇಹದಲ್ಲಿಯೇ ವಾಸಿಸುತ್ತದೆ. ಇದು ದೈಹಿಕ ಸಂವೇದನೆಗಳ ಮೇಲೆ ಪರಿಣಾಮ ಬೀರುತ್ತದೆ. ಅಂದರೆ, ಇದರಿಂದಾಗಿ ಉಂಟಾಗುವ ಆತಂಕವು ಅವರ ಉಸಿರಾಟವು ಅರಿವಿಲ್ಲದಂತಾಗುತ್ತದೆ ಮತ್ತು ಇಡೀ ದೇಹವು ಗಟ್ಟಿಯಾಗಿ, ಬಿಗಿಯಾಗುವಂತೆ ಮಾಡುತ್ತದೆ. ಇಂತಹ ಸಮಯದಲ್ಲಿ ಭಯ ಅವರನ್ನು ಆವರಿಸುತ್ತದೆ. ಹೀಗಾಗಿ ಯೋಗದ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೀಗೆ ಹೃದಯ ಬಡಿತವನ್ನು ತಗ್ಗಿಸಲು ಅವಕಾಶ ನೀಡುತ್ತದೆ. ಜನರನ್ನು ಅವರ ದೇಹದೊಂದಿಗೆ ಮತ್ತೆ ಸಂಪರ್ಕಕ್ಕೆ ತರುತ್ತದೆ.

ಧ್ಯಾನವನ್ನು ಪ್ರತಿದಿನ ಮಾಡಿದರೆ, ಅದು ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ನಿಧಾನವಾಗಿ ಮರುತರಬೇತಿಗೊಳಪಡಿಸುತ್ತದೆ ಮತ್ತು ಆಘಾತವನ್ನು ಹೋಗಲಾಡಿಸುತ್ತದೆ. ಇದು ಆತಂಕ, ಖಿನ್ನತೆ, ನಿದ್ರಾಹೀನತೆ ಮತ್ತು ದುಃಸ್ವಪ್ನ ನಿರ್ವಹಣೆಗೆ ಸಹಾಯ ಮಾಡುತ್ತದೆ. ಕೋಪವನ್ನು ಬಿಡಲು ಮತ್ತು ಸಾಮಾಜಿಕವಾಗಿ ಇತರರೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ.

ಸಂಶೋಧನೆ ಏನು ಹೇಳುತ್ತದೆ?

ಯೋಗವು ಜನರಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿವೆ. ಕೆಲವೊಮ್ಮೆ ಇದು ಔಷಧಿಗಳಿಗಿಂತಲೂ ಹೆಚ್ಚು, ಆಘಾತಕಾರಿ ಒತ್ತಡದ ಲಕ್ಷಣಗಳನ್ನು ನಿವಾರಿಸುತ್ತದೆ. ಯೋಗಾಭ್ಯಾಸ ಆರಂಭಿಸಿದ ನಂತರ, ಅವರ ಮೆದುಳಿನ ನ್ಯೂರೋ-ಇಮೇಜಿಂಗ್ ಪ್ರದೇಶಗಳಲ್ಲಿ ಸ್ವಯಂ-ಅರಿವಿಗೆ ಸಂಪರ್ಕ ಹೊಂದಿದ ಒಂದು ಗ್ರಹಿಸಬಹುದಾದ ಕ್ರಿಯಾಶೀಲತೆಯನ್ನು ತೋರಿಸಿದೆ. ಆಘಾತಕ್ಕೊಳಗಾದ ಜನರಿಗೆ ಯೋಗವು ಉತ್ತಮ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಧ್ಯಾನ ಮಾಡುವುದು ಹೇಗೆ? ಆರಂಭಿಕರು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ..

ವಾಸ್ತವವಾಗಿ, ಯೋಗ ಮತ್ತು ಧ್ಯಾನದ ಪರಿಣಾಮವು ಇತರ ಚಿಕಿತ್ಸಾ ವಿಧಾನಗಳಾದ ನರಗಳ ಪ್ರತಿಕ್ರಿಯೆ, ಕಣ್ಣಿನ ಚಲನೆಯ ಸಂವೇದನಾಶೀಲತೆ ಮತ್ತು ಮರು ಸಂಸ್ಕರಣೆಗೆ ಹೋಲಿಸಿದರೆ ತುಂಬಾ ಹೆಚ್ಚು. ಆಘಾತಕ್ಕೆ ಚಿಕಿತ್ಸೆ ನೀಡಲು, ಮೆದುಳಿನ ಸಕ್ರಿಯಗೊಳಿಸುವಿಕೆ ಮತ್ತು ಮೆಮೊರಿ ಸಂಸ್ಕರಣೆಯನ್ನು ಬದಲಾಯಿಸುವಂತಹ ಹಲವಾರು ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳು ಅಗತ್ಯವಾಗಿರುತ್ತವೆ. ಇವುಗಳೂ ಕೂಡ ಪರಿಣಾಮಕಾರಿಯಾಗಿದ್ದರೂ, ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸವು ಕ್ರಮೇಣ ಪ್ರಕ್ರಿಯೆಯಾಗಿರುವುದರಿಂದ ಹೆಚ್ಚಿನ ವ್ಯವಸ್ಥೆಗಳಿಗೆ ಸಹಾಯಕ ಎಂದು ಕಂಡುಬಂದಿದೆ.

ನಿದ್ರಾಹೀನತೆಯು ತುಂಬಾ ಕೆಟ್ಟದ್ದು. ಏಕೆಂದರೆ, ಅದು ಕೆಲವೊಮ್ಮೆ ಅವರ ಕೆಲಸದ ವೇಳಾಪಟ್ಟಿ ಮತ್ತು ಅವರ ಜೀವನದ ಇತರೆ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಧ್ಯಾನ ಮತ್ತು ಯೋಗದ ನಿಯಮಿತ ಅಭ್ಯಾಸದಿಂದ ಹೆಚ್ಚಿನ ವಿಷಯಗಳನ್ನು ಭಾವನಾತ್ಮಕವಾಗಿ ಚಿಕಿತ್ಸೆ ಮತ್ತು ಅಂತಿಮವಾಗಿ ಇಲ್ಲವಾಗುವ ಸಾಮರ್ಥ್ಯವನ್ನು ಹೊಂದುತ್ತವೆ. ಹೀಗಾಗಿ, ಧ್ಯಾನವು ಆಘಾತದ ಉಳಿದ ಒತ್ತಡಗಳಿಂದ ಪ್ರಭಾವಿತವಾಗಿರುವ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಯೋಗವು ದೇಹವನ್ನು ಈ ಸಮಯದಲ್ಲಿ ಹಿಡಿದಿಟ್ಟುಕೊಂಡಿದ್ದ ಒತ್ತಡವನ್ನು ಹೋಗಲಾಡಿಸುತ್ತದೆ.

ನಗುವಿನಂತಹ ಇತರ ಪುನಶ್ಚೇತನಕಾರಿ ಚಿಕಿತ್ಸೆಗಳು:

ಆಘಾತವು ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಗೆ ಕಾರಣವಾಗುತ್ತದೆ. ಇದು ಆತಂಕ ಮತ್ತು ಖಿನ್ನತೆ, ಭಾವನಾತ್ಮಕ ನಿಶ್ಚೇತನ ಮತ್ತು ಸಾಮಾಜಿಕ ಹಿಂಜರಿಕೆ ಮುಂತಾದ ಲಕ್ಷಣಗಳನ್ನು ಹೊಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆಘಾತವು ಜನರನ್ನು ಅವರ ಆಂತರಿಕ ಮಗುವಿನಿಂದ ದೂರವಿಡುತ್ತದೆ. ಯೋಗ ಮತ್ತು ಧ್ಯಾನದ ದೈನಂದಿನ ಅಭ್ಯಾಸವನ್ನು ನಗೆ ಚಿಕಿತ್ಸೆ ಮತ್ತು ಶುದ್ಧ ಆಯುರ್ವೇದ ಆಹಾರ ಮತ್ತು ತಿನ್ನುವಿಕೆಯಂತಹ ಇತರ ಪುನಶ್ಚೇತನಕಾರಿ ಚಿಕಿತ್ಸೆಗಳೊಂದಿಗೆ ಹೆಚ್ಚಿಸಿದಾಗ, ಬಹಳಷ್ಟು ಬದಲಾವಣೆಗಳನ್ನು ತರಬಹುದು.

ಆಘಾತವನ್ನು ವಾಸಿಮಾಡುವುದು ಕ್ರಮೇಣ ಪ್ರಕ್ರಿಯೆ. ಆದರೆ, ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸ ಸೇರಿದಂತೆ ಇತರ ಪ್ರಾಚೀನ ಚೇತರಿಸಿಕೊಳ್ಳುವ ಮತ್ತು ಹಿತವಾದ ಚಿಕಿತ್ಸೆಗಳೊಂದಿಗೆ ಸಾಧ್ಯ. ಇದು ಆಘಾತದ ಹಲವಾರು ರೋಗಲಕ್ಷಣಗಳ ಮೇಲೆ ಕೆಲಸ ಮಾಡುವ ಮೂಲಕ ಮತ್ತು ಭಾವನಾತ್ಮಕವಾಗಿ ಗುಣಪಡಿಸುತ್ತಾ ಮನಸ್ಸು ಮತ್ತು ದೇಹವನ್ನು ಜೋಡಿಸುತ್ತವೆ.


Stay up to date on all the latest ಜೀವನಶೈಲಿ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp