ಪೊಲೀಸರ ಥಳಿತಕ್ಕೆ ಯುವಕ ಸಾವು: ಉದ್ರಿಕ್ತರಿಂದ ಪೊಲೀಸ್‌ಗೆ ಧರ್ಮದೇಟು

ವಿಚಾರಣೆ ನಿಮಿತ್ತ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆದ್ಯೊಯ್ದು ಥಳಿಸಿ ಆತನ ಸಾವಿಗೆ ಕಾರಣವಾಗಿದ್ದ ಪೊಲೀಸರ ವಿರುದ್ಧ ಯುವಕನ ಕಡೆಯವರು ಧರ್ಮದೇಟು...
ಪಿಎಸ್ಐ ಮೇಲೆ ಹಲ್ಲೆ
ಪಿಎಸ್ಐ ಮೇಲೆ ಹಲ್ಲೆ
Updated on

ಸೂರತ್: ವಿಚಾರಣೆ ನಿಮಿತ್ತ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆದ್ಯೊಯ್ದು ಥಳಿಸಿ ಆತನ ಸಾವಿಗೆ ಕಾರಣವಾಗಿದ್ದ ಪೊಲೀಸರ ವಿರುದ್ಧ ಯುವಕನ ಕಡೆಯವರು ಸಾರ್ವಜನಿಕವಾಗಿ ಧರ್ಮದೇಟು ನೀಡಿರುವ ಘಟನೆ ಸೂರತ್ ನಲ್ಲಿ ವರದಿಯಾಗಿದೆ.

ಘಟನೆ ಕುರಿತಂತೆ ಯುವಕನ ಕಡೆಯವರೊಂದಿಗೆ ಚೋಕ್ ಬಜಾರ್ ಠಾಣೆ ಪಿಎಸ್ಐ ವಿಎಸ್ ಪಟೇಲ್ ಚರ್ಚಿಸುತ್ತಿದ್ದಾಗ ಉದ್ರಿಕ್ತ ಗುಂಪು ಏಕಾಏಕಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 30-50 ಜನರಿಂದ ತಂಡ ಪಿಎಸ್ಐ ಅವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಸದ್ಯ ಗಾಯಗೊಂಡಿರುವ ಪಟೇಲ್ ಅವರನ್ನು ಸೂರತ್ ನ ಸ್ಮಿಮೆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜೂಜಾಡುತ್ತಿದ್ದ ಆರೋಪದ ಮೇಲೆ ಕುಡಿದು ಚಿತ್ತಾಗಿದ್ದ ಯುವಕನೊಬ್ಬನನ್ನು ಪೊಲೀಸರು ಠಾಣೆಗೆ ಕರೆದ್ಯೊಯ್ದು ಥಳಿಸಿದ್ದಾರೆ. ಕಂಠ ಪೂರ್ತಿ ಕುಡಿದಿದ್ದ 25 ವರ್ಷದ ಮಹೇಂದರ್ ಮಕ್ವಾನಾ ಒಂದೇ ಏಟಿಗೆ ಮೃತಪಟ್ಟಿದ್ದು, ಇದರಿಂದ ಕೋಪಗೊಂಡ ಯುವಕನ ಕಡೆಯವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com