ಸ್ವಯಂ ಘೋಷಿತ ದೇವಮಾನವನ ಕಪಿಮುಷ್ಟಿಯಲ್ಲಿದ್ದ 28 ಯುವಕರ ರಕ್ಷಣೆ

ಸ್ವಯಂ ಘೋಷಿತ ದೇವಮಾನನೊಬ್ಬನ ಹಿಡಿತದಲ್ಲಿ ನೊಂದಿದ್ದ 28 ಯುವಕನ್ನು ಮುಂಬೈ ಪೊಲೀಸರು ಶನಿವಾರ ರಕ್ಷಣೆ ಮಾಡಿದ್ದಾರೆ...
ಸ್ವಯಂ ಘೋಷಿತ ದೇವಮಾನವನ ಕಪಿಮುಷ್ಟಿಯಲ್ಲಿದ್ದ 28 ಯುವಕರ ರಕ್ಷಣೆ
ಸ್ವಯಂ ಘೋಷಿತ ದೇವಮಾನವನ ಕಪಿಮುಷ್ಟಿಯಲ್ಲಿದ್ದ 28 ಯುವಕರ ರಕ್ಷಣೆ
Updated on

ಮುಂಬೈ: ಸ್ವಯಂ ಘೋಷಿತ ದೇವಮಾನನೊಬ್ಬನ ಹಿಡಿತದಲ್ಲಿ ನೊಂದಿದ್ದ 28 ಯುವಕನ್ನು ಮುಂಬೈ ಪೊಲೀಸರು ಶನಿವಾರ ರಕ್ಷಣೆ ಮಾಡಿದ್ದಾರೆ.

ಮುಂಬೈನ ಕಂದೀವಾಲಿ ಪ್ರದೇಶದಲ್ಲಿನ ಸ್ವಯಂ ಘೋಷಿತ ದೇವಮಾನವನೊಬ್ಬ ಧರ್ಮ ಹೆಸರಿನಲ್ಲಿ 28 ಯುವಕರನ್ನು ಬಂಗಲೆಯಲ್ಲಿಟ್ಟುಕೊಟ್ಟು ಹಿಂಸೆ ನೀಡುತ್ತಿದ್ದಾನೆಂಬ ಮಾಹಿತಿ ತಿಳಿದ ಕೂಡಲೇ ಬಂಗಲೆ ಮೇಲೆ ದಾಳಿ ಮಾಡಿದ ಪೊಲೀಸರು ಯುವಕರನ್ನು ರಕ್ಷಣೆ ಮಾಡಿದ್ದಾರೆ.

ಧರ್ಮದ ಹೆಸರಿನಲ್ಲಿ 28 ಜನ ಯುವಕರನ್ನು ಕೂಡಿ ಹಾಕಿಕೊಂಡಿರುವ ಸ್ವಯಂ ಘೋಷಿತ ದೇವಮಾನನೊಬ್ಬ ಮಾನಸಿಕ ಹಾಗೂ ದೈಹಿಕವಾಗಿ ಪ್ರತೀನಿತ್ಯ ಹಿಂಸೆ ನೀಡುತ್ತಿದ್ದಾನೆಂದು ಹೇಳಿ ಮಗುವೊಂದು ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿತ್ತು.

ಇದರಂತೆ ಸಮ್ತಾ ನಗರದ ಪೊಲೀಸರು ಶುಕ್ರವಾರ ಮನೆ ಮೇಲೆ ದಾಳಿ ಮಾಡಿದ್ದು, ಈ ವೇಳೆ 28 ಜನ ಯುವಕರು ಹಾಗೂ ಉತ್ತರ ಪ್ರದೇಶ ಮೂಲದ 12 ಜನ ಅಪ್ರಾಪ್ತ ಮಕ್ಕಳನ್ನು ರಕ್ಷಣೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವೇಳೆ ಭಗವಾನ್ ದಾಸ್ ತಿವಾರಿ ಮತ್ತು ದೇವೇಂದ್ರ ಮನೋಜ್ ದುಬೆ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com