ಉಗ್ರರ ವಿರುದ್ಧ ಸಿಡಿದೆದ್ದ ಭಾರತ: ದೀಪ ಬೆಳಗಿ ಹಬ್ಬ ಆಚರಿಸಿದ ವಾರಣಾಸಿ

ಉರಿ ಉಗ್ರ ದಾಳಿ ಭಾರತೀಯರ ಪಾಲಿಗೆ ಆರದ ಗಾಯವಾಗಿ ಪರಿಣಮಿಸಿತ್ತು. ಭಯೋತ್ಪಾದನಾ ಚಟುವಟಿಕೆಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ತಾಳ್ಮೆ ಹಾಗೂ ಶಾಂತಿಯನ್ನೇ ಕಾಪಾಡಿಕೊಂಡು ಬಂದಿದ್ದ ಭಾರತೀಯ ಸೇನೆ ಕಳೆದೆರಡು ದಿನಗಳ ಹಿಂದೆ...
ಉಗ್ರರ ವಿರುದ್ಧ ಸಿಡಿದೆದ್ದ ಭಾರತ: ದೀಪ ಬೆಳಗಿ ಹಬ್ಬ ಆಚರಿಸಿದ ವಾರಣಾಸಿ
ಉಗ್ರರ ವಿರುದ್ಧ ಸಿಡಿದೆದ್ದ ಭಾರತ: ದೀಪ ಬೆಳಗಿ ಹಬ್ಬ ಆಚರಿಸಿದ ವಾರಣಾಸಿ

ವಾರಣಾಸಿ: ಉರಿ ಉಗ್ರ ದಾಳಿ ಭಾರತೀಯರ ಪಾಲಿಗೆ ಆರದ ಗಾಯವಾಗಿ ಪರಿಣಮಿಸಿತ್ತು. ಭಯೋತ್ಪಾದನಾ ಚಟುವಟಿಕೆಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ತಾಳ್ಮೆ ಹಾಗೂ ಶಾಂತಿಯನ್ನೇ ಕಾಪಾಡಿಕೊಂಡು ಬಂದಿದ್ದ ಭಾರತೀಯ ಸೇನೆ ಕಳೆದೆರಡು ದಿನಗಳ ಹಿಂದೆ ಉಗ್ರರ ನೆಲೆಗಳ ವಿರುದ್ಧ ಸಿಡಿದೆದ್ದಿತ್ತು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ಮಾಡುವ ಮೂಲಕ ಸುಮಾರು 50 ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿತ್ತು. ಯೋಧರ ಈ ಕಾರ್ಯಾಚರಣೆ ಭಾರತೀಯರ ಪಾಲಿಗಂತೂ ಹೇಳತೀರದ ಸಂತಸದ ಕ್ಷಣಗಳನ್ನು ಬಂದೊದಗುವಂತೆ ಮಾಡಿದೆ.

ಭಾರತೀಯ ಸೇನೆಯ ಈ ಶೌರ್ಯ ಹಾಗೂ ವೀರತನದ ಕಾರ್ಯಾಚರಣೆಗೆ ಎಲ್ಲೆಡೆ ಇದೀಗ ಹರ್ಷೋದ್ಘಾರಗಳು ವ್ಯಕ್ತವಾಗುತ್ತಿವೆ. ಎಲ್ಲೆಲ್ಲೂ ಸೇನೆಯ ಸಾಧನೆ ಹಾಗೂ ಪ್ರಧಾನಿ ಮೋದಿಯವರ ನಿರ್ಧಾರದ ಪರವಾಗಿ ಘೋಷಣೆಗಳು ಕೇಳಿಬರತೊಡಗಿವೆ.

ಸೇನೆಯ ಈ ಕಾರ್ಯಾಚರಣೆ ವಾರಣಾಸಿಯಲ್ಲಂತೂ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದೆ. ವಾರಣಾಸಿಯಲ್ಲಿ ಪ್ರತೀನಿತ್ಯ ಗಂಗಾ ಆರತಿಯನ್ನು ನಡೆಸಲಾಗುತ್ತದೆ. ಆದರೆ, ನಿನ್ನೆ ನಡೆದ ಗಂಗಾ ಆರತಿ ಮಾತ್ರ ಸಾಕಷ್ಟು ವಿಶೇಷತೆಯಿಂದ ಕೂಡಿತ್ತು. ಗಂಗಾ ಆರತಿ ವೇಳೆ ಭಾರತೀಯ ಸೇನೆಗೆ ಅಭಿನಂದನೆಗಳನ್ನು ಸಲ್ಲಿಸಲಾಗಿತ್ತು. ಆರತಿ ವೇಳೆ ಜನರು ಘೋಷಣಾ ವಾಕ್ಯಗಳನ್ನು ಪ್ರದರ್ಶಿಸತೊಡಗಿದ್ದರು. ಜೈ ಹಿಂದ್, ಭಾರತ್ ಮಾತಾ ಕಿ ಜೈ ಎಂಬ ಘೋಷಣಾ ವಾಕ್ಯಗಳನ್ನು ಹಿಡಿದು ಎಲ್ಲೆಲ್ಲೂ ಜನರು ಓಡಾಡುತ್ತಿರು ದೃಶ್ಯಗಳು ಕಂಡುಬಂದಿತ್ತು.

ಗಂಗಾ ಸೇವಾ ನಿಧಿಯ ಸದಸ್ಯರು ದೀಪವನ್ನು ಬೆಳಗುವ ಮೂಲಕ ಯೋಧರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳು ವಾರಣಾಸಿಯಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com