ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ರಾಜಧಾನಿ ಜೆರುಸಲೇಂ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ಧ ಭಾರತ ಮತದಾನ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ನೆತಾನ್ಯಹು, ಖಂಡಿತಾ ಭಾರತದ ನಡೆ ಬೇಸರ ಮೂಡಿಸಿತ್ತು. ಆದರೆ ಒಂದು ನಕಾರಾತ್ಮಕ ಮತ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರದು. ಆದರೆ ನಾವು ಇವೆಲ್ಲವನ್ನೂ ಬದಿಗೊತ್ತಿ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಹೇಳಿದರು. ಅಂತೆಯೇ ಭಾರತ ಮತ್ತು ಇಸ್ರೇಲ್ ಸಂಬಂಧವನ್ನು ಸ್ವರ್ಗದಲ್ಲಿ ನಿಶ್ಚಯವಾದ ಸಂಬಂಧ ಎಂದು ಬಣ್ಣಿಸಿದ ನೇತನ್ಯಹು, ಸಾಕಷ್ಟು ಕ್ಷೇತ್ರಗಳಲ್ಲಿ ಉಭಯ ದೇಶಗಳು ಸೌಹಾರ್ಧ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕಿದೆ. ರಕ್ಷಣೆ, ಕೃಷಿ, ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಕಾರ ಅತ್ಯಗತ್ಯ ಎಂದು ಹೇಳಿದರು.