ಕೊರೋನಾ ವೈರಸ್: ಸೋಂಕಿಗೊಳಗಾಗಿದ್ದ 37 ಮಂದಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಕೊರೋನಾ ವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಪರಿಣಾಮ ಜನತೆ ಸಾಕಷ್ಟು ಆತಂತಕ್ಕೀಡಾಗಿದ್ದು, ಈ ನಡುಲ್ಲೇ ಸಂತಸದ ವಿಚಾರದ ಎಂಬಂತೆ ದೇಶದಲ್ಲಿ ನೂರಾರು ಸೋಂಕು ಪೀಡಿತರ ಪೈಕಿ 37 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಪರಿಣಾಮ ಜನತೆ ಸಾಕಷ್ಟು ಆತಂತಕ್ಕೀಡಾಗಿದ್ದು, ಈ ನಡುಲ್ಲೇ ಸಂತಸದ ವಿಚಾರದ ಎಂಬಂತೆ ದೇಶದಲ್ಲಿ ನೂರಾರು ಸೋಂಕು ಪೀಡಿತರ ಪೈಕಿ 37 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ. 

ದೇಶದಲ್ಲಿ 500 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಇದರಲ್ಲಿ 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ವೈರಸ್'ಗೆ 9 ಮಂದಿ ಬಲಿಯಾಗಿದ್ದು, ಸೋಂಕು ಪೀಡಿತ 500 ಮಂದಿಯ ಪೈಕಿ 41 ಮಂದಿ ವಿದೇಶಿ ಪ್ರಜೆಗಳಿದದಾರೆಂದು ತಿಳಿಸಿದೆ. 

ಈ ನಡುವೆ ದೇಶದ 30 ರಾಜ್ಯಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು, ಜನರನ್ನು ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ. 

ಉತ್ತರಪ್ರದೇಶ, ದೆಹಲಿ, ಬಿಹಾರ, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳನ್ನು ಸಂಪೂರ್ಣವಾಗಿ ಬದ್ ಮಾಡಲಾಗಿದೆ. ಈ ನಡುವೆ ಜಾಗತಿಕವಾಗಿ ಒಟ್ಟಾಗಿ 1 ಲಕ್ಷ ಮಂದಿ ವೈರಸ್ ನಿಂದ ಗುಣಮುಖರಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com