ಒಡಿಶಾ: ಆಕಾಶದಿಂದ ಧರೆಗಿಳಿದು ಬಂದ ತರಕಾರಿಗಳ ಬೆಲೆ: ಜನಸಾಮಾನ್ಯರು ನಿರಾಳ

ಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಬಹುತೇಕ ತರಕಾರಿಗಳ ಬೆಲೆ ಕೆಲವು ತಿಂಗಳುಗಳಿಂದ ದೇಶದೆಲ್ಲೆಡೆ ಗಗನಕ್ಕೇರಿತ್ತು. ಈ ನಡುವೆ ಒಡಿಶಾ ರಾಜ್ಯದಲ್ಲಿ ದುಬಾರಿ ದರದಲ್ಲಿ ಮಾರಾಟಗೊಳ್ಳುತ್ತಿದ್ದ ತರಕಾರಿಗಳ ಬೆಲೆ ಕುಸಿದಿದೆ.

ಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ. ತರಕಾರಿಗಳ ಬೆಲೆ ಅರ್ಧಕ್ಕರ್ಧ ಕಡಿತಗೊಂಡಿರುವುದಾಗಿ ತಿಳಿದುಬಂದಿದೆ. 

ಕಾಲಿಫ್ಲವರ್ ಈ ಹಿಂದೆ ಪ್ರತಿ ಕೆ.ಜಿ 40 ರೂ.ಗಳಿಗೆ ಮಾರಾಟಗೊಳ್ಳುತ್ತಿತ್ತು. ಇದೀಗ್ 20 ರೂ.ಗೆ ಮಾರಾಟವಾಗುತ್ತಿದೆ. 

ಕಿಲೊ 30 ರೂ. ಬದನೆಕಾಯಿಗೆ ಈಗ 15 ರೂ. ಅದೇ ರೀತಿ ಟೊಮೆಟೊ, ಕುಂಬಳಕಾಯಿ ಬೆಲೆಗಳೂ ಅರ್ಧಕ್ಕರ್ಧ ಕಡಿತಗೊಂಡಿವೆ. ಇದರಿಂದಾಗಿ ಜನಸಾಮಾನ್ಯರು ನಿಟ್ಟುಸಿರುಬಿಡುವಂತಾಗಿದ್ದು ರಾಜ್ಯದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com