ತಮಿಳುನಾಡು: ಸೆಂಗೋಟ್ಟಯನ್ ಗೆ ಹಣಕಾಸು, ಕೀರ್ತನಾಗೆ ಕೈಗಾರಿಕೆ.. ಗೃಹ ಇಲಾಖೆ ತಾವೇ ಉಳಿಸಿಕೊಂಡ ಸಿಎಂ ಜೊಸೆಫ್ ವಿಜಯ್! ಯಾರಿಗೆ ಯಾವ ಇಲಾಖೆ? ಇಲ್ಲಿದೆ ಮಾಹಿತಿ

ಮುಖ್ಯಮಂತ್ರಿ ವಿಜಯ್ ಅವರು ಸಾರ್ವಜನಿಕ, ಸಾಮಾನ್ಯ ಆಡಳಿತ, ಪೊಲೀಸ್, ಗೃಹ ಇಲಾಖೆ ಹಾಗೂ ವಿಶೇಷ ಕಾರ್ಯಕ್ರಮ ಅನುಷ್ಠಾನ ಸೇರಿದಂತೆ ಪ್ರಮುಖ ಖಾತೆಗಳ ಜೊತೆಗೆ ಮಹಾನಗರ ಆಡಳಿತ, ಮಹಿಳಾ ಕಲ್ಯಾಣ..
CM Vijay keeps Home, Sengottaiyan gets Finance
ತಮಿಳುನಾಡು ಸಿಎಂ ವಿಜಯ್tnie
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ತಮ್ಮ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಕುತೂಹಲಕಾರಿಯಾಗಿ ಗೃಹ ಇಲಾಖೆಯನ್ನು ವಿಜಯ್ ತಾವೇ ಇರಿಸಿಕೊಂಡಿದ್ದಾರೆ.

ಹೌದು. ಮುಖ್ಯಮಂತ್ರಿ ಜೋಸೆಫ್ ವಿಜಯ್ ಹಾಗೂ ಒಂಬತ್ತು ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಒಂದು ವಾರದ ನಂತರ ಅವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ನಟ ಹಾಗೂ ಸಿಎಂ ವಿಜಯ್ ಗೃಹ ಖಾತೆಯನ್ನು ತಾವೇ ಇರಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಮುಖ್ಯಮಂತ್ರಿಗಳ ಕಾರ್ಯದರ್ಶಿ-1 ಪಿ. ಸೆಂಥಿಲ್ಕುಮಾರ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಅವರನ್ನು ಭೇಟಿ ಮಾಡಿ, ಸಚಿವರಿಗೆ ಶಿಫಾರಸು ಮಾಡಲಾದ ಖಾತೆಗಳ ಪಟ್ಟಿಯನ್ನು ಹಸ್ತಾಂತರಿಸಿದರು.

ನಂತರ, ಸೆಂಥಿಲ್ಕುಮಾರ್ ಅವರು ಮುಖ್ಯಮಂತ್ರಿಯನ್ನು ಅವರ ನಿವಾಸದಲ್ಲೂ ಭೇಟಿಯಾದರು. ಗಮನಾರ್ಹವಾಗಿ, ಮತ್ತು ಬಹುಶಃ ಕಳೆದ ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ, ತಮಿಳುನಾಡಿನ ಮುಖ್ಯಮಂತ್ರಿಯೊಬ್ಬರು 9 ಖಾತೆಗಳನ್ನು ತಾವೇ ಉಳಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ವಿಜಯ್ ಅವರು ಸಾರ್ವಜನಿಕ, ಸಾಮಾನ್ಯ ಆಡಳಿತ, ಪೊಲೀಸ್, ಗೃಹ ಇಲಾಖೆ ಹಾಗೂ ವಿಶೇಷ ಕಾರ್ಯಕ್ರಮ ಅನುಷ್ಠಾನ ಸೇರಿದಂತೆ ಪ್ರಮುಖ ಖಾತೆಗಳ ಜೊತೆಗೆ ಮಹಾನಗರ ಆಡಳಿತ, ಮಹಿಳಾ ಕಲ್ಯಾಣ, ಯುವ ಕಲ್ಯಾಣ ಮತ್ತು ನಗರ ಹಾಗೂ ಜಲ ಸರಬರಾಜು ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

CM Vijay keeps Home, Sengottaiyan gets Finance
ವಿಜಯ್ ಸಿಎಂ ಆದ ಮೇಲೆ ನನ್ನ ಮೇಲೆ ಜನ ಒತ್ತಡ ಹಾಕುತ್ತಿದ್ದಾರೆ, ಆದರೆ ಇಲ್ಲಿ ಪರಿಸ್ಥಿತಿ ಭಿನ್ನ: ಪವನ್ ಕಲ್ಯಾಣ್; Video

ಉಳಿದಂತೆ ಸಚಿವ ಸಂಪುಟದಲ್ಲಿ ಎರಡನೇ ಸ್ಥಾನದಲ್ಲಿರುವ ಸಚಿವ ಎನ್. ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಖಾತೆಗಳನ್ನು ನೀಡಲಾಗಿದೆ. ಅವರ ಖಾತೆಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ಗಳು, ಬಡತನ ನಿರ್ಮೂಲನಾ ಯೋಜನೆ, ಗ್ರಾಮೀಣ ಸಾಲಬಾಧೆ ನಿವಾರಣೆ ಮತ್ತು ಸಣ್ಣ ನೀರಾವರಿ ಸೇರಿದಂತೆ ನೀರಾವರಿ ಯೋಜನೆಗಳು ಸೇರಿವೆ.

ಹಿರಿಯ ಸಚಿವ ಸಂಪುಟ ಸದಸ್ಯ ಕೆ.ಎ. ಸೆಂಗೊಟ್ಟಯ್ಯನ್ ಅವರಿಗೆ ಹಣಕಾಸು ಖಾತೆ ವಹಿಸಲಾಗಿದೆ. ಅವರು ಹಣಕಾಸು, ಪಿಂಚಣಿ ಮತ್ತು ಪಿಂಚಣಿ ಭತ್ಯೆಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಅಂತೆಯೇ ಸಚಿವ ಆರ್. ನಿರ್ಮಲ್ ಕುಮಾರ್ ಅವರಿಗೆ ಇಂಧನ ಸಂಪನ್ಮೂಲ ಮತ್ತು ಕಾನೂನು ಖಾತೆಗಳನ್ನು ನೀಡಲಾಗಿದೆ. ಅವರು ವಿದ್ಯುತ್ ಮತ್ತು ಅನೌಪಚಾರಿಕ ಇಂಧನ ಅಭಿವೃದ್ಧಿ, ಕಾನೂನು, ನ್ಯಾಯಾಲಯಗಳು, ಕಾರಾಗೃಹಗಳು, ಭ್ರಷ್ಟಾಚಾರ ತಡೆ, ವಿಧಾನಸಭೆ, ರಾಜ್ಯಪಾಲ, ಚುನಾವಣೆಗಳು ಮತ್ತು ಪಾಸ್‌ಪೋರ್ಟ್‌ ಇಲಾಖೆಗಳನ್ನು ನಿರ್ವಹಣೆ ಮಾಡಲಿದ್ದಾರೆ ಎನ್ನಲಾಗಿದೆ.

ಗಮನಾರ್ಹವಾಗಿ, ಎಸ್. ಕೀರ್ತನಾ ಅವರನ್ನು ಕೈಗಾರಿಕಾ ಸಚಿವರಾಗಿ ನೇಮಕ ಮಾಡಲಾಗಿದ್ದು, ಅವರ ಖಾತೆಗಳಲ್ಲಿ ಕೈಗಾರಿಕೆಗಳು ಮತ್ತು ಹೂಡಿಕೆ ಪ್ರೋತ್ಸಾಹ ಸೇರಿವೆ. ನಟ ವಿಜಯ್ ಆಪ್ತ ಆಧವ್ ಅರ್ಜುನಾ ಅವರಿಗೆ ಸಾರ್ವಜನಿಕ ಕಾಮಗಾರಿಗಳು ಮತ್ತು ಕ್ರೀಡಾ ಅಭಿವೃದ್ಧಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಅವರು ಕಟ್ಟಡಗಳು, ಹೆದ್ದಾರಿಗಳು, ಸಣ್ಣ ಬಂದರುಗಳು ಮತ್ತು ಕ್ರೀಡಾ ಅಭಿವೃದ್ಧಿಯನ್ನು ನೋಡಿಕೊಳ್ಳಲಿದ್ದಾರೆ.

ಇತ್ತ ಕೆ.ಜಿ. ಅರುಣ್‌ರಾಜ್ ಅವರನ್ನು ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ನೇಮಕ ಮಾಡಲಾಗಿದೆ. ಅವರು ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ, ಪಿ. ವೆಂಕಟರಮಣನ್ ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ನೇಮಕ ಮಾಡಲಾಗಿದೆ. ಅವರ ಜವಾಬ್ದಾರಿಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ರಕ್ಷಣೆ ಮತ್ತು ಬೆಲೆ ನಿಯಂತ್ರಣ ಸೇರಿವೆ.

ರಾಜ್‌ಮೋಹನ್ ಅವರಿಗೆ ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ ಖಾತೆಗಳನ್ನು ನೀಡಲಾಗಿದೆ. ಅವರು ಶಾಲಾ ಶಿಕ್ಷಣ, ಪುರಾತತ್ವ, ತಮಿಳು ಅಧಿಕೃತ ಭಾಷೆ ಮತ್ತು ತಮಿಳು ಸಂಸ್ಕೃತಿ, ಮಾಹಿತಿ ಮತ್ತು ಪ್ರಚಾರ, ಚಲನಚಿತ್ರ ತಂತ್ರಜ್ಞಾನ, ಸುದ್ದಿಪತ್ರ ಕಾಗದ ನಿಯಂತ್ರಣ, ಸ್ಟೇಷನರಿ ಮತ್ತು ಮುದ್ರಣ ಹಾಗೂ ಸರ್ಕಾರಿ ಮುದ್ರಣಾಲಯವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.

ಡಾ. ಕೆ.ಜಿ. ಪ್ರಭು ಅವರಿಗೆ ನೈಸರ್ಗಿಕ ಸಂಪನ್ಮೂಲ ಖಾತೆ ನೀಡಲಾಗಿದ್ದು, ಅವರು ಖನಿಜಗಳು ಮತ್ತು ಗಣಿ ಇಲಾಖೆಯನ್ನು ನೋಡಿಕೊಳ್ಳಲಿದ್ದಾರೆ.

ಒಟ್ಟಾರೆ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಖಾತೆ ಹಂಚಿಕೆಯಲ್ಲೂ ನಟ ಹಾಗೂ ಸಿಎಂ ವಿಜಯ್ ವೈವಿಧ್ಯತೆ ಮೆರೆದಿದ್ದು, ಗೃಹ ಇಲಾಖೆಯನ್ನು ತಾವೇ ಉಳಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com