social_icon
  • Tag results for Mysuru

ಕಾವೇರಿ ಹೋರಾಟದ ನಡುವೆ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರ ಹರಿವು ಹೆಚ್ಚಳ, ಬಂದ್ ಬಗ್ಗೆ ಇಂದು ಅಧಿಕೃತ ನಿರ್ಧಾರ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ವಿವಿಧೆಡೆ ಪ್ರತಿಭಟನೆಯ ನಡುವೆಯೇ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರಹರಿವು ಹೆಚ್ಚಳವಾಗಿದ್ದು, ಭಾನುವಾರ 6,874 ಕ್ಯೂಸೆಕ್ ನೀರು ಬಿಡಲಾಗಿದೆ.

published on : 25th September 2023

ರಾಜ್ಯದ ಹಿತಕ್ಕೆ ಪ್ರತಿಭಟನೆ ಮಾಡುವುದು ಅವರ ಹಕ್ಕು; ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ: ಡಾ. ಜಿ.ಪರಮೇಶ್ವರ್

ಮುಂಗಾರು ಮಳೆ ವೈಫಲ್ಯದಿಂದ ನಮ್ಮ ರೈತರ ಬೆಳೆಗಳಿಗೆ, ಕುಡಿಯಲು ನೀರಿಲ್ಲದಿರುವಾಗ ತಮಿಳು ನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ಬಂದ್ ತೀವ್ರವಾಗಿದೆ. ಕಾವೇರಿದ ಕಿಚ್ಚು ಉಂಟಾಗಿದೆ ಮದ್ದೂರು ಭಾಗದಲ್ಲಿ ಪ್ರತಿಭಟನಾಕಾರರ ಹೋರಾಟ ತೀವ್ರವಾಗಿದೆ. 

published on : 23rd September 2023

ಬರಗಾಲ ಹಿನ್ನೆಲೆಯಲ್ಲಿ ‘ಸರಳ ಮತ್ತು ಅರ್ಥಪೂರ್ಣ’ ದಸರಾ ಆಚರಣೆಗೆ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿ ‘ಸರಳ ಮತ್ತು ಅರ್ಥಪೂರ್ಣ’ ದಸರಾ ಆಚರಿಸಲು ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರು ಶುಕ್ರವಾರ ಹೇಳಿದ್ದಾರೆ.

published on : 22nd September 2023

ಕಾವೇರಿ ಕಿಚ್ಚು: ಮಂಡ್ಯ, ಮೈಸೂರು ಭಾಗಗಳಲ್ಲಿ ತೀವ್ರ ಪ್ರತಿಭಟನೆ, ಬೆಂಗಳೂರಿಗೆ ನೀರು ಪೂರೈಕೆ ನಿಲ್ಲಿಸಲು ಆಗ್ರಹ

ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಬೆನ್ನಲ್ಲೇ ಕರ್ನಾಟಕದಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿದೆ.

published on : 22nd September 2023

ಕರ್ನಾಟಕ: ಟ್ರೆಕ್ಕಿಂಗ್ ವೇಳೆ ಎನ್ಸೆಫಾಲಿಟಿಸ್ ಸೋಂಕು, 20 ದಿನ ಜೀವನ್ಮರಣ ಹೋರಾಟದ ಬಳಿಕ ಟ್ರೆಕ್ಕರ್ ಸಾವು

ಟ್ರೆಕ್ಕಿಂಗ್ ವೇಳೆ ಎನ್ಸೆಫಾಲಿಟಿಸ್ ಸೋಂಕಿಗೆ ತುತ್ತಾಗಿ ಕಳೆದ 20 ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 25 ವರ್ಷದ ಟ್ರೆಕ್ಕರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

published on : 20th September 2023

ಮೈಸೂರು: ಮಹಿಳಾ ಎಸ್‌ಐ ಪುತ್ರನ ಬೈಕ್ ಸ್ಟಂಟ್ ನಿಂದ 68 ವರ್ಷದ ರೈತನ ಪ್ರಾಣಕ್ಕೆ ಕುತ್ತು, ಕ್ರಮಕ್ಕೆ ಆಗ್ರಹ

ನಂಜನಗೂಡು ತಾಲೂಕಿನ ಹಿಮ್ಮಾವು ಎಂಬಲ್ಲಿ ಶನಿವಾರ ನಂಜನಗೂಡಿನ ಮಹಿಳಾ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಮಗನ ಬೈಕ್ ಸ್ಟಂಟ್ 68 ವರ್ಷದ ರೈತನ ಪ್ರಾಣಕ್ಕೆ ಕುತ್ತು ತಂದಿದೆ.

published on : 19th September 2023

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ನೌಕಾಪಡೆಯ ಮಾಜಿ ಅಧಿಕಾರಿ ಸಾವು

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

published on : 18th September 2023

ಮೈಸೂರಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ 'ಲೋಕಸ್ಪಂದನ ಕ್ಯೂಆರ್ ಕೋಡ್' ವ್ಯವಸ್ಥೆ

ಪೊಲೀಸ್ ಠಾಣೆಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ  ನಗರ ಪೊಲೀಸರು ಎಲ್ಲಾ ಠಾಣೆಗಳಲ್ಲಿ ‘ಲೋಕ ಸ್ಪಂದನ’ಕ್ಯೂಆರ್ ಕೋಡ್ ವ್ಯವಸ್ಥೆ ಪರಿಚಯಿಸುತ್ತಿದ್ದಾರೆ. ನಗರದ ಎಲ್ಲಾ 18 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು ಮತ್ತು ಐದು ಸಂಚಾರ ಪೊಲೀಸ್ ಠಾಣೆಗಳಲ್ಲಿ ಕ್ಯೂಆರ್ ಕೋಡ್ ಅನ್ನು ಪ್ರದರ್ಶಿಸಲಾಗುತ್ತದೆ.

published on : 17th September 2023

ಮೈಸೂರು: ಸೆಪ್ಟೆಂಬರ್ 19 ರಿಂದ ರಾಷ್ಟ್ರೀಯ ಮಕ್ಕಳ ರಂಗೋತ್ಸವ

ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಸೆ.19 ರಿಂದ 24 ರವರೆಗೆ ರಾಷ್ಟ್ರೀಯ ಮಕ್ಕಳ ರಂಗೋತ್ಸವವನ್ನು ನಡೆಸಲಾಗುತ್ತಿದೆ.

published on : 17th September 2023

ಕೈಕೊಟ್ಟ ಮುಂಗಾರು, ಜಲಾಶಯಗಳ ನೀರಿನ ಮಟ್ಟ ಕುಸಿತ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭತ್ತ ಕೃಷಿ ಬಿಟ್ಟ ರೈತರು!

ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯತ್ತಿದೆ. ಹೀಗಾಗಿ ಅಣೆಕಟ್ಟುಗಳಲ್ಲಿರುವ ನೀರು ಕೃಷಿ ಮಾಡಲು ಸಾಧ್ಯವಿಲ್ಲ ಎಂಬ ಆತಂಕದಿಂದ ಕಾವೇರಿ ಜಲಾನಯನಪ್ರದೇಶದ ರೈತರು ಭತ್ತದ ಕೃಷಿ ಕೈ ಬಿಟ್ಟಿದ್ದಾರೆ.

published on : 16th September 2023

ರಾಜ್ಯಾದ್ಯಂತ ತೀವ್ರ ಬರ: ಈ ವರ್ಷ ಅದ್ದೂರಿ ದಸರಾ ಆಚರಣೆಗೆ ಕತ್ತರಿ

ದಸರಾ ಹಬ್ಬಕ್ಕೆ ಇನ್ನೊಂದೇ ತಿಂಗಳು ಬಾಕಿ. ಮೈಸೂರು ದಸರಾ ಎಂದರೆ ಇಡೀ ನಾಡಿಗೆ ವೈಭವ. ಆದರೆ ಈ ವರ್ಷ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ.

published on : 16th September 2023

ಬಿಜೆಪಿ-ಜೆಡಿಎಸ್ ಮೈತ್ರಿ: ಹ್ಯಾಟ್ರಿಕ್ ಗೆಲುವಿಗೆ ರಣತಂತ್ರ; ದೇವೇಗೌಡರ ಬಳಿ ಮಂಡಿಯೂರಿ ಪ್ರತಾಪ್ ಸಿಂಹ ನಮಸ್ಕಾರ!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

published on : 12th September 2023

'ಸಂಘರ್ಷವಾದರೂ ಸರಿ ಮಹಿಷ ದಸರಾಗೆ ಅವಕಾಶ ಇಲ್ಲ; ಸಿದ್ದು ಸರ್ಕಾರದಲ್ಲಿ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ': ಪ್ರತಾಪ ಸಿಂಹ

ಮಹಿಷ ದಸರಾ ಎಂಬ ಅನಾಚಾರಕ್ಕೆ ಚಾಮುಂಡಿಬೆಟ್ಟ ಸೂಕ್ತವಲ್ಲ. ಅಲ್ಲಿ ಮಹಿಷ ದಸರಾ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

published on : 8th September 2023

ಮೈಸೂರು ದಸರಾ 2023: ಜಂಬೂಸವಾರಿ ಆನೆಗಳಿಗೆ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ; ಗಜಪಡೆಗೆ ತೂಕ ಪರೀಕ್ಷೆ

ವಿಶ್ವ ವಿಖ್ಯಾತ ಮೈಸೂರು ದಸರಾ 2023 ಕಳೆಕಟ್ಟುತ್ತಿದೆ. ದಸರಾ ಆಚರಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿರುವ ಅಭಿಮನ್ಯು ನೇತೃತ್ವದ ಆನೆಗಳನ್ನು ಮೈಸೂರಿನ ಅರಮನೆ ಆವರಣಕ್ಕೆ ಬರ ಮಾಡಿಕೊಳ್ಳಲಾಯಿತು.

published on : 6th September 2023

ಮೈಸೂರು ದಸರಾ: ಇಂದು ಮಧ್ಯಾಹ್ನ ಅರಮನೆ ಪ್ರವೇಶಿಸಲಿರುವ ಗಜಪಡೆ, ರಾಜವಂಶಸ್ಥರಿಂದ ಪೂಜೆ

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಗಜಪಡೆ ಮೆರವಣಿಗೆ ನೋಡುವುದು ಇನ್ನೊಂದು ಸೊಗಸು. ನಾಡದೇವತೆ ಚಾಮುಂಡಿ ಮೂರ್ತಿಯನ್ನು ಹೊರುವ ಆನೆ ಮತ್ತು ಅದರ ಹಿಂದೆ ಸಾಗುವ ಆನೆಗಳಿಗೆ ಒಂದು ತಿಂಗಳ ಮೊದಲೇ ತಾಲೀಮು ನೀಡಲಾಗುತ್ತದೆ. 

published on : 5th September 2023
1 2 3 4 5 6 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9