ಬಾಗ್ದಾದ್: ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಅವರ ಹತ್ಯೆ ಸಂಚು ವಿಫಲಗೊಂಡು ಪ್ರಧಾನಿ ಸ್ವಲ್ಪದರಲ್ಲೇ ಪಾರಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ನೆಲೆಗೊಂಡ ಪ್ರಧಾನಿ ನಿವಾಸ ಬಳಿಯೇ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.
ಶಸ್ತ್ರಸಜ್ಜಿತ ಡ್ರೋನ್ ಮೂಲಕ ಪ್ರಧಾನಿ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪ್ರಧಾನಿಯ ಅಂಗರಕ್ಷಕರು ಸೇರಿದಂತೆ ಒಟ್ಟು 7 ಮಂದಿ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ದಾಳಿ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಟ್ವೀಟ್ ಮಾಡಿದ್ದು, ದೇವರ ದಯದಿಂದ ತಾವು ಸುರಕ್ಷಿತವಾಗಿದ್ದು, ಜನರೊಂದಿಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ದಾಳಿ ಘಟನೆ ನಡೆದ ನಂತರ ಹಿಂದಿನ ದಿನವೇ ನಿಗದಿಯಾಗಿದ್ದ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಶಾಂತಚಿತ್ತರಾಗಿ ಕಂಡುಬಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದುವರೆಗೂ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಇದನ್ನೂ ಓದಿ: ಇರಾಕ್ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ, 54 ಮಂದಿ ಸಾವು
ಶಿಯಾ ಬಂಡುಕೋರ ಸಂಘಟನೆ ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷದ ವಾತಾವರಣ ದೇಶದಲ್ಲಿ ನಿರ್ಮಾಣಗೊಂಡಿತ್ತು. ಇರಾಕ್ ಸಂಸತ್ ಚುನಾವಣಾ ಫಲಿತಾಂಶವನ್ನು ಶಿಯಾ ಬಂಡುಕೋರ ಪರ ಸಂಘಟನೆಗಳು ವಿರೋಧಿಸಿದ್ದವು.
ತೈಲ ಟ್ಯಾಂಕರ್ ಪಲ್ಟಿ: ತೈಲಕ್ಕಾಗಿ ಮುಗಿಬಿದ್ದ ಜನ; ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಸಜೀವದಹನ!
ಜರ್ಮನಿಯ ಹೈಸ್ಪೀಡ್ ರೈಲಿನಲ್ಲಿ ಚಾಕುವಿನಿಂದ ದಾಳಿ, ಹಲವರಿಗೆ ಗಾಯ
'ಸಕ್ಕರೆ ಬಾಂಬ್'ಗೆ ಜನ ಕಂಗಾಲ್: 1 ಕೆಜಿ ಸಕ್ಕರೆ ಬೆಲೆ ಪೆಟ್ರೋಲ್ಗಿಂತ ಹೆಚ್ಚು; ಇಮ್ರಾನ್ ಖಾನ್ಗೆ ಜನರ ಹಿಡಿ ಶಾಪ!
ವಾಯುಮಾಲಿನ್ಯ ಹೆಚ್ಚಳ: ದಟ್ಟ ಹೊಗೆಯಿಂದಾಗಿ ಚೀನಾದಲ್ಲಿ ಆಟದ ಮೈದಾನಗಳು, ಹೆದ್ದಾರಿಗಳು ಬಂದ್
ಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಬ್ರಿಟನ್ ಸಚಿವ ರಿಷಿ ಸುನಕ್
Advertisement