ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ಪ್ರಾಣಿಗಳಲ್ಲಿ ಸಂಭೋಗದ ಸಂಕೇತಗಳು ವೇಗವಾಗಿ ಕಾಣೆಯಾಗುತ್ತಿವೆ: ಅಧ್ಯಯನ

ತಲತಲಾಂತರದಿಂದ ಪೀಳಿಗೆಯಿಂದ ಪೀಳಿಗೆಗೆ ಪ್ರಾಣಿಗಳ ಆರೋಗ್ಯಕರ ಸಂತಾನಾಭಿವೃದ್ಧಿಗಾಗಿ ಬಳವಳಿಯಾಗಿ ಬಂದಿದ್ದ ಸಂಭೋಗ ಸಂಕೇತಗಳು ಬರುಬರುತ್ತಾ

ನ್ಯೂಯಾರ್ಕ್: ತಲತಲಾಂತರದಿಂದ ಪೀಳಿಗೆಯಿಂದ ಪೀಳಿಗೆಗೆ ಪ್ರಾಣಿಗಳ ಆರೋಗ್ಯಕರ ಸಂತಾನಾಭಿವೃದ್ಧಿಗಾಗಿ ಬಳವಳಿಯಾಗಿ ಬಂದಿದ್ದ ಸಂಭೋಗ ಸಂಕೇತಗಳು ಬರುಬರುತ್ತಾ ವೇಗವಾಗಿ ಕ್ಷೀಣಿಸುತ್ತಿವೆ ಎನ್ನುತ್ತದೆ ನೂತನ ಅಧ್ಯಯನವೊಂದು.

"ಇದು ಕೆಲವು ಪ್ರಾಣಿಗಳನ್ನು ಹೆಚ್ಚು ಅಳಿವಿನಂಚಿಗೆ ದೂಕುತ್ತದೆ. ಈ ಸಂಭೋಗ ಸಂಕೇತಗಳು ಕಾಣೆಯಾಗುತ್ತ ಬಂದಂತೆ ಅಳಿವಿನ ಪಾಯವನ್ನು ಎದುರಿಸುವುದಲ್ಲದೆ, ಬೇರೆ ಜಾತಿಯ ಪ್ರಾಣಿಗಳೊಂದಿಗೆ ಮಿಶ್ರತಳಿ ಸಂತಾನಾಭಿವೃದ್ಧಿಗೆ ಎಡೆ ಮಾಡಿಕೊಡುತ್ತದೆ" ಎಂದು ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಎಮಿಲಿ ವೀಗೆಲ್ ತಿಳಿಸಿದ್ದಾರೆ.

"ಆದರೆ ಈ ಸಂಕೇತಗಳು ಹಲವಾರು ಪ್ರಾಣಿವರ್ಗದಲ್ಲಿ ಕಳೆದುಹೋಗುತ್ತಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ" ಎಂದು ವಿವರಿಸಿದ್ದಾರೆ ವೀಗೆಲ್.

"ತಾನು ಬದುಕುತ್ತಿರುವ ಸಾಮಾಜಿಕ ಮತ್ತು ಭೌತಿಕ ಪರಿಸರದಲ್ಲಿ ಪ್ರಾಣಿವರ್ಗದ ಮೇಲಿರುವ ಒತ್ತಡ ಕೂಡ ಇದಕ್ಕೆ ಕಾರಣ ಇರಬಹುದು ಎಂದು ನಾವು ಪರಿಸರವನ್ನು ಅಧ್ಯಯನ ಮಾಡಿದಾಗ ತಿಳಿದುಬರುತ್ತದೆ" ಎಂದಿದ್ದಾರೆ.

ಅದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ ಸುತ್ತಮುತ್ತಲಿನ ವಿಪರೀತ ಶಬ್ದದ ಮಧ್ಯೆ ಈ ಸಂಭೋಗದ ಕರೆಗಳ ಶಬ್ದಗಳು ಕೇಳದೆ ಇರುವುದು ಕೂಡ ಕಾರಣವಾಗಬಹುದು ಎಂದು ಲೇಖಕರು ತಿಳಿಸಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT