ಭಕ್ತಿ-ಜ್ಯೋತಿಷ್ಯ

ಕಾಕ ಶಾಸ್ತ್ರ

ಮನುಷ್ಯನಿಗೂ ಕಾಗೆಗೂ ಅವಿನಾಭಾವ ಸಂಬಂಧ. ಕಾಗೆಯನ್ನು ಪಿತೃದೇವತೆ ಎಂದೂ ಕರೆಯುತ್ತರೆ. ಹೀಗಾಗಿಯೇ ಪಿತೃಪಕ್ಷದಲ್ಲಿ ಪಿತೃತರ್ಪಣ ನೀಡುವಾಗ ಕಾಗೆ ಬೇಕೇಬೇಕು.  
ಮೃತಪಟ್ಟವರ ಉತ್ತರ ಕ್ರಿಯೆಯ ದಿನ ಮಧ್ಯಾಹ್ನ ಇತರರು ಊಟ ಮಾಡುವ ಮೊದಲು ಅನ್ನವನ್ನು ಕಾಗೆಗೆ ಇಡುವ ಕ್ರಮ ಇದೆ. ಸುತ್ತಮುತ್ತಲೂ ಬಹಳ ಸಂಖ್ಯೆಯಲ್ಲಿ ಕಾಗೆಗಳು ಇದ್ದರೂ ಕೆಲವರ ಉತ್ತರಕ್ರಿಯೆಯಲ್ಲಿ ಅನ್ನವನ್ನು ತಿನ್ನುವುದಕ್ಕೆ ಕಾಗೆಗಳು ಬರುವುದೇ ಇಲ್ಲ.
ಇದಕ್ಕೆ ಸರಿಯಾದ ಕಾರಣವನ್ನು ಯಾರೂ ಹುಡುಕಲು ಹೋಗಲೇ ಇಲ್ಲ.  ಮನುಷ್ಯ ಸತ್ತ ನಂತರ ಕಾಗೆಯಾಗಿ ಮರು ಜನ್ಮ ಪಡೆದು ಬರುತ್ತಾನೆ ಎಂದು ಹೇಳುತ್ತಾರೆ. ಇದರಿಂದ ಕಾಗೆಗಳಿಗೆ ಆಹಾರ ಕೊಟ್ಟು ತಮ್ಮ ಪೂರ್ವಿಕರ ತೃಪ್ತಿಗಾಗಿ ಊಟ ಹಾಕುವುದು ಹಿಂದೂಗಳ ನಂಬಿಕೆ.
ಕಾಗೆ ಮನೆಯ ಎದುರು ಬಂದು ಕೂಗುವ ಧ್ವನಿಯಿಂದ ನೆಂಟರು ಬರುವ ಸೂಚನೆ ಎಂದು ನಂಬಿಕೆ. ಕಾಗೆಗಳ ಬೇರೆ ಬೇರೆ ಚೇಷ್ಟೆಯಿಂದ ಬೇರೆ ಬೇರೆ ಘಟನೆ ನಡೆಯುವ ನಂಬಿಕೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಕೆಲವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾಗೆಯ ಶಕುನ ನೋಡುತ್ತಾರೆ. ಕಾಗೆ ಎಡಭಾಗದಲ್ಲಿ ಕೂಗುತ್ತಾ ಹಿಂದಿನಿಂದ ಬರುತ್ತಿದ್ದರೆ ಇದರಿಂದ ಲಾಭ ಇದೆ ಎಂದು ತಿಳಿಯುತ್ತಾರೆ.
ಎಡ ಭಾಗದಲ್ಲಿ ಕೂಗಿ ಎದುರಾಗಿ ಬರುತ್ತಿದ್ದರೆ ಏನಾದರೂ ತೊಂದರೆ ಇದೆ ಎಂದು ತಿಳಿಯುತ್ತಾರೆ.  ಕೂಗಿಕೊಂಡು ಎದುರಿಗೆ ಬಂದರೆ ಕೈಗೊಂಡ ಕೆಲಸ ಕಾರ್ಯಗತವಾಗುವುದಿಲ್ಲ. ಕಾಗೆ ಮನೆಯ ಒಳಗೆ ಬರಬಾರದು. ನೆತ್ತಿಗೆ ಕುಕ್ಕಬಾರದು. ಕಾಗೆಗಳ ಮೈಥುನ ನೋಡಬಾರದು.
ಮನೆಯ ಮೇಲೆ ಕಾಗೆಗಳು ಗುಂಪಾಗಿ ಇದ್ದು ಕೂಗಬಾರದು. ಕಾಗೆಗಳು ಮನುಷ್ಯರ ಶರೀರದ ಮೇಲೆ ಮಲ ವಿಸರ್ಜನೆ ಮಾಡಬಾರದು. ಇದರಿಂದ ಏನಾದರೂ ತೊಂದರೆ ಇದೆ ಎಂದು ತಿಳಿಯಲಾಗುತ್ತದೆ.
ಕಾಗೆ ತಿನಿಸನ್ನು ಬಾಯಿಯಲ್ಲಿ ಕಚ್ಚಿಕೊಂಡು ಎಡಭಾಗದಿಂದ ಬಲ ಭಾಗಕ್ಕೆ ಹೋದರೆ ಕಾರ್ಯ ಸಫಲವಾಗುತ್ತದೆ. ಕಾಗೆ ಇನ್ನೊಂದು ಕಾಗೆಗೆ ತಿನಿಸು ಕೊಡುವುದನ್ನು ನೋಡಿದರೆ ಒಳ್ಳೆಯದು. ಕಾಗೆಗಳು ಕೊಕ್ಕಿನಿಂದ ಅಥವಾ ರೆಕ್ಕೆಯಿಂದ ಮನುಷ್ಯನ ಮೇಲೆ ದಾಳಿ ಮಾಡಿದರೆ ಶತ್ರುಗಳು ಜಾಸ್ತಿಯಾಗುತ್ತಾರೆ.  ಕಾಗೆಗಳು ನೀರಿನಲ್ಲಿ ಸ್ನಾನ ಮಾಡುವುದನ್ನು ಕಂಡರೆ ಮುಂದೆ ಮಳೆ ಬರುವ ಸೂಚನೆ.
= ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೂರಂ ಹಬ್ಬಕ್ಕೂ ಮುನ್ನ ದೊಡ್ಡ ದುರಂತ: ತ್ರಿಶೂರ್‌ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; 12 ಕಾರ್ಮಿಕರು ಸಾವು

ಪರಮೇಶ್ವರ್ ಗೆ ಬೆಟ್ಟಿಂಗ್ ಸಂಕಷ್ಟ: FIR ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ

IPL 2026: ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ; ಈಗ 150ಕ್ಕೆ ಹತ್ತಿರ!

Video: 'ನಾನೇನು ಮಾಡ್ಲಿಲ್ಲ.. ನ್ಯಾಯ ಕೊಡಿ'; 9 ಅಂತಸ್ತಿನ ಕಟ್ಟಡ ಏರಿ POCSO ಆರೋಪಿ ಹೈಡ್ರಾಮಾ!

ಸಿದ್ದರಾಮಯ್ಯಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: CM ಆಪ್ತ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

SCROLL FOR NEXT