ಸಂಗ್ರಹ ಚಿತ್ರ 
ಭಕ್ತಿ-ಭವಿಷ್ಯ

ಬಂತು ಶ್ರಾವಣ, ಈ ಮಾಸದಲ್ಲಿ ಏನೆಲ್ಲಾ ಮಾಡಿದರೆ ಒಳಿತಾಗುವುದು ತಿಳಿಯೋಣ!

ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಮಾಸ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗಿದ್ದು, ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸ ಎಂದೇ ಹೇಳಲಾಗುತ್ತದೆ.

ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಬಂದಿದೆ.  ಶ್ರಾವಣ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಮಾಸ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗಿದ್ದು, ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸ ಎಂದೇ ಹೇಳಲಾಗುತ್ತದೆ. ಶ್ರಾವಣದಲ್ಲಿ ನಾಗರ ಪಂಚಮಿ ಮಂಗಳ ಗೌರಿ ವ್ರತಗಳನ್ನು ಆಚರಿಸುವ ಪದ್ಧತಿ ಇದ್ದು, ಈ ಮಾಸದ ಸೋಮವಾರಗಳಿಗೆ ವಿಶೇಷ ಮಹತ್ವವಿದೆ.
ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿಸಲಾಗಿರುವುದರಿಂದ ಅಥವಾ ಶ್ರಾವಣ ಮಾಸ ಶಿವನ ಮಾಸ ಎಂದು ಪರಿಗಣಿಸಲಾಗಿರುವುದರಿಂದ ಶ್ರಾವಣ ಮಾಸದ ಸೋಮವಾರಗಳಂದು ಉಪವಾಸವಿದ್ದು, ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸಿ ಜೀವನದ ಗುಣಮಟ್ಟ ಹೆಚ್ಚಲಿದೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದಲ್ಲಿ ಈ ಇವುಗಳನ್ನು ಮಾಡಿದರೆ ಒಳಿತಾಗಲಿದೆ:
ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನಾದಿಗಳನ್ನು ಮುಗಿಸಿ, ಸ್ವಲ್ಪ ನಿಮಿಷವಾದರೂ ಧ್ಯಾನ ಮಾಡಿ
ಹತ್ತಿರ ಶಿವನ ದೇವಾಲಯವಿದ್ದರೆ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ
ಸಾತ್ವಿಕ ಆಹಾರ ಹೆಚ್ಚು ಸೇವಿಸಿ, ಸಾಧ್ಯವಾದರೆ, ಅವಕಾಶ ಇದ್ದಲ್ಲಿ ಉಪವಾಸ ಮಾಡಿ
ನಿಮಗೆ ಸಾಧ್ಯವಿದ್ದು, ಅಗತ್ಯವಿರುವವರಿಗೆ ಅನ್ನದಾನ ಮಾಡಿದರೆ ಒಳಿತು
ಸಂಜೆ ವೇಳೆಗೆ ದೀಪ ಹಚ್ಚಿ ಮತ್ತೆ ಕೆಲವು ನಿಮಿಷ ಧ್ಯಾನ ಮಾಡಿ ಶಿವ ಮೂಲ ಮಂತ್ರ (ಓಂ
ನಮಃ ಶಿವಾಯ) ಪಠಿಸಿ
ಶ್ರಾವಣ ಮಾಸದ ಅವಧಿಯಲ್ಲಿ ಈ ರೀತಿ ಮಾಡಿದಲ್ಲಿ ಅದು ಜೀವನ ವಿಧಾನವನ್ನು ಬದಲಿಸಿ, ನಿಮ್ಮ ಆಹಾರ ಹಾಗೂ ಜೀವನ ಶೈಲಿ ಉತ್ತಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೇ ಸತತ ಒಂದು ತಿಂಗಳು ಈ ಮೇಲಿನ ಅಂಶಗಳನ್ನು ರೂಢಿಸಿಕೊಂಡಲ್ಲಿ ಮನಸ್ಸು, ದೇಹ ಹಗುರವಾಗಿ ಸಕಾರಾತ್ಮಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT