ಸಂಗ್ರಹ ಚಿತ್ರ 
ಭಕ್ತಿ-ಜ್ಯೋತಿಷ್ಯ

ಬಂತು ಶ್ರಾವಣ, ಈ ಮಾಸದಲ್ಲಿ ಏನೆಲ್ಲಾ ಮಾಡಿದರೆ ಒಳಿತಾಗುವುದು ತಿಳಿಯೋಣ!

ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಮಾಸ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗಿದ್ದು, ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸ ಎಂದೇ ಹೇಳಲಾಗುತ್ತದೆ.

ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಬಂದಿದೆ.  ಶ್ರಾವಣ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಮಾಸ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗಿದ್ದು, ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸ ಎಂದೇ ಹೇಳಲಾಗುತ್ತದೆ. ಶ್ರಾವಣದಲ್ಲಿ ನಾಗರ ಪಂಚಮಿ ಮಂಗಳ ಗೌರಿ ವ್ರತಗಳನ್ನು ಆಚರಿಸುವ ಪದ್ಧತಿ ಇದ್ದು, ಈ ಮಾಸದ ಸೋಮವಾರಗಳಿಗೆ ವಿಶೇಷ ಮಹತ್ವವಿದೆ.
ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿಸಲಾಗಿರುವುದರಿಂದ ಅಥವಾ ಶ್ರಾವಣ ಮಾಸ ಶಿವನ ಮಾಸ ಎಂದು ಪರಿಗಣಿಸಲಾಗಿರುವುದರಿಂದ ಶ್ರಾವಣ ಮಾಸದ ಸೋಮವಾರಗಳಂದು ಉಪವಾಸವಿದ್ದು, ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸಿ ಜೀವನದ ಗುಣಮಟ್ಟ ಹೆಚ್ಚಲಿದೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದಲ್ಲಿ ಈ ಇವುಗಳನ್ನು ಮಾಡಿದರೆ ಒಳಿತಾಗಲಿದೆ:
ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನಾದಿಗಳನ್ನು ಮುಗಿಸಿ, ಸ್ವಲ್ಪ ನಿಮಿಷವಾದರೂ ಧ್ಯಾನ ಮಾಡಿ
ಹತ್ತಿರ ಶಿವನ ದೇವಾಲಯವಿದ್ದರೆ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ
ಸಾತ್ವಿಕ ಆಹಾರ ಹೆಚ್ಚು ಸೇವಿಸಿ, ಸಾಧ್ಯವಾದರೆ, ಅವಕಾಶ ಇದ್ದಲ್ಲಿ ಉಪವಾಸ ಮಾಡಿ
ನಿಮಗೆ ಸಾಧ್ಯವಿದ್ದು, ಅಗತ್ಯವಿರುವವರಿಗೆ ಅನ್ನದಾನ ಮಾಡಿದರೆ ಒಳಿತು
ಸಂಜೆ ವೇಳೆಗೆ ದೀಪ ಹಚ್ಚಿ ಮತ್ತೆ ಕೆಲವು ನಿಮಿಷ ಧ್ಯಾನ ಮಾಡಿ ಶಿವ ಮೂಲ ಮಂತ್ರ (ಓಂ
ನಮಃ ಶಿವಾಯ) ಪಠಿಸಿ
ಶ್ರಾವಣ ಮಾಸದ ಅವಧಿಯಲ್ಲಿ ಈ ರೀತಿ ಮಾಡಿದಲ್ಲಿ ಅದು ಜೀವನ ವಿಧಾನವನ್ನು ಬದಲಿಸಿ, ನಿಮ್ಮ ಆಹಾರ ಹಾಗೂ ಜೀವನ ಶೈಲಿ ಉತ್ತಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೇ ಸತತ ಒಂದು ತಿಂಗಳು ಈ ಮೇಲಿನ ಅಂಶಗಳನ್ನು ರೂಢಿಸಿಕೊಂಡಲ್ಲಿ ಮನಸ್ಸು, ದೇಹ ಹಗುರವಾಗಿ ಸಕಾರಾತ್ಮಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT