ಇ-ಬೈಕ್-ಗೋ ಜೊತೆಗೆ ಹಿರೋ ಎಲೆಕ್ಟ್ರಿಕ್  ಪಾಲುದಾರಿಕೆಗೆ: ಬೆಂಗಳೂರಿನ ಜನತೆಗೆ ಇದರಿಂದಾಗುವ ಲಾಭವೇನು ಗೊತ್ತೇ? 
ವಾಹನ

ಇ-ಬೈಕ್-ಗೋ ಜೊತೆ ಹಿರೋ ಎಲೆಕ್ಟ್ರಿಕ್ ಪಾಲುದಾರಿಕೆ: ಬೆಂಗಳೂರಿನ ಜನತೆಗೆ ಇದರಿಂದಾಗುವ ಲಾಭವೇನು ಗೊತ್ತೇ?

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆ ಹಿರೋ ಎಲೆಕ್ಟ್ರಿಕ್ ಅಮೃತ್ ಸರ ಮೂಲದ ಈಗ ಮುಂಬೈ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ ಅಪ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆ ಹಿರೋ ಎಲೆಕ್ಟ್ರಿಕ್ ಅಮೃತ್ ಸರ ಮೂಲದ ಈಗ ಮುಂಬೈ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ ಅಪ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.
 
ಇವಿ ಟೆಕ್ನಾಲಜಿ ಹಾಗೂ ಐಒಟಿ ಸಕ್ರಿಯ ಕಾರ್ಯಾಚರಣೆಯಲ್ಲಿ ನೈಪುಣ್ಯತೆಯ ಮೂಲಕ ಸರಕು ಸಾಗಣಿಗೆಯನ್ನು ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ವರ್ಗಾಯಿಸುವುದಕ್ಕೆ ಈ ಪಾಲುದಾರಿಕೆ ಸಹಕಾರಿಯಾಗಲಿದೆ 

ಹಿರೋ ಎಲೆಕ್ಟ್ರಿಕ್ 1,000 ಬೈಕ್ ಗಳ ಪೈಕಿ ಈಗಾಗಲೇ 120 ವಿದ್ಯುತ್ ಚಾಲಿತ ಬೈಕ್ ಗಳನ್ನು ಪೂರೈಸಿದೆ. ಸರಕು ಸಾಗಾಣಿಗೆ ವಿಭಾಗದಲ್ಲಿ ಅಷ್ಟೇ ಅಲ್ಲದೇ ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್ ಅಮೃತ್ ಸರ, ಜೈಪುರಗಳಲ್ಲಿ ಸಾರ್ವಜನಿಕರಿಗೆ ಮಾಸಿಕ ಬಾಡಿಗೆ ಆಧಾರದಲ್ಲಿಯೂ ಹಿರೋ ವಿದ್ಯುತ್ ಚಾಲಿತ ವಾಹನಗಳನ್ನು ಇ ಬೈಕ್ ಗೋ ಸಂಸ್ಥೆ ನಿಯೋಜಿಸುತ್ತಿದೆ. 

ಹಿರೋ ಎಲೆಟ್ರಿಕ್ಸ್ ಇತ್ತೀಚೆಗಷ್ಟೇ ಸಿಟಿ ಸ್ಪೀಡ್ ಆವೃತ್ತಿಯಲ್ಲಿ Nyx-HX ವಾಹನವನ್ನು ಬಿಡುಗಡೆ ಮಾಡಿತ್ತು. ಈ ಮಾದರಿಯ ವಾಹನಗಳು ಕಡಿಮೆ ಖರ್ಚಿನ ನಿರ್ವಹಣೆಯದ್ದಾಗಿದ್ದು, ಹೆಚ್ಚು ಲೋಡ್ ಕೊಂಡೊಯ್ಯುವ ಸಾಮರ್ಥ್ಯವಿದೆ. ಅಷ್ಟೇ ಅಲ್ಲದೇ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸುಲಭವಾಗಿ ಸಂಚರಿಸುವ ಸಾಮರ್ಥ್ಯ ಮೊದಲಾದ ಹಲವಾರು   ಗ್ರಾಹಕರಿಗೆ ಉಪಯುಕ್ತವಾಗುವ ವೈಶಿಷ್ಟ್ಯಗಳು ಲಭ್ಯವಿದೆ. 

ಇ ಬೈಕ್ ಗೋ ಎಲ್ಒಟಿ ಚಾಲಿತ ಮೊಬಿಲಿಟಿ ಸೊಲ್ಯೂಷನ್ ನ್ನು ನೀಡುತ್ತಿದ್ದು, ಚಂದಾದಾರಿಕೆ ಆಧಾರದಲ್ಲಿ ಮುಂಬೈ, ಬೆಂಗಳೂರು, ದೆಹಲಿ ಅಮೃತ್ ಸರ್ ಹಾಗೂ ಜೈಪುರ್ ಗಳಲ್ಲಿ ಗ್ರಾಹಕರಿಗೆ ಸೌಲಭ್ಯ ಒದಗಿಸುತ್ತಿದೆ. ಎಲ್ಒಟಿ ಚಾಲಿತ ವಾಹನಗಳು ಎರಡು ಗಂಟೆ ಚಾರ್ಜ್ ಮಾಡಿದರೆ ಗಂಟೆಗೆ 55/ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಮಾಲಿನ್ಯ ರಹಿತ ಸಂಚಾರ ಒದಗಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್