'ಬ್ರೆಡ್ ತಿಂದರೆ ಕ್ಯಾನ್ಸರ್' ವರದಿಯ ಪರಿಣಾಮ: ಪಶ್ಚಿಮ ಬಂಗಾಳದಲ್ಲಿ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿತ! 
ವಾಣಿಜ್ಯ

'ಬ್ರೆಡ್ ತಿಂದರೆ ಕ್ಯಾನ್ಸರ್' ವರದಿ: ಪಶ್ಚಿಮ ಬಂಗಾಳದಲ್ಲಿ ಬ್ರೆಡ್ ಉತ್ಪಾದನೆ ಕುಸಿತ!

ಸಿಎಸ್‌ಇ ವರದಿ ಪ್ರಕಟವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಬೇಕರಿಗಳಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ.

ಕೋಲ್ಕತಾ: ಬ್ರೆಡ್‌, ಬನ್‌, ಪಿಜ್ಜಾ, ಬರ್ಗರ್‌ ಹಾಗೂ ಪಾವ್‌ಗಳನ್ನು ತಿಂದರೆ ಮಾರಕ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಲ್ಲವು ಎಂಬ ವರದಿ ಪ್ರಕಟವಾಗುತ್ತಿದ್ದಂತೆಯೇ  ಬೇಕರಿಗಳಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ.
ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಸಂಸ್ಥೆ ನೀಡಿದ್ದ  ಬ್ರೆಡ್, ಬ್ಯಾನ್ ಪಿಜ್ಜಾ, ಬರ್ಗರ್ ಸೇವನೆ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಲ್ಲವು ಎಂಬ ವರದಿಯನ್ನು ಮಾಧ್ಯಮಗಳು ಪ್ರಕಟಿಸುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ. ವರದಿಯಿಂದ ಜನರಲ್ಲಿ ಆತಂಕ ಮೂಡಿಸಿದ್ದು ಬ್ರೆಡ್ ಉತ್ಪಾದನೆ ಮಾಡುತ್ತಿದ್ದ ಕಾರ್ಖಾನೆಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ ಎಂದು ಪಶ್ಚಿಮ ಬಂಗಾಳ ಬೇಕರ್ಸ್ ಸಂಘಟನೆಯ ಮುಖಂಡ ಹಾಗೂ ಸಂಸದ ಇದ್ರಿಸ್ ಅಲಿ ತಿಳಿಸಿದ್ದಾರೆ.
ವರದಿ ಪ್ರಕಾಟವಾಗುವುದಕ್ಕೂ ಮುನ್ನ ಪ್ರತಿ ದಿನ 10 -12 ಲಕ್ಷ ಪೌಂಡ್ ನಷ್ಟು ಬ್ರೆಡ್ ಉತ್ಪಾದನೆಯಾಗುತ್ತಿತ್ತು. ಈ ಪೈಕಿ ಪಶ್ಚಿಮ ಬಂಗಾಳ ರಾಜ್ಯ ಒಂದಕ್ಕೆ 5 ಲಕ್ಷ ಪೌಂಡ್ ನಷ್ಟು ಬ್ರೆಡ್ ಅಗತ್ಯವಿರುತ್ತಿತ್ತು. ಆದರೆ ವರದಿ ಪ್ರಕಟವಾದ ನಂತರ ಶೇ.30 ರಷ್ಟು ಬ್ರೆಡ್ ಉತ್ಪಾದನೆ ಕುಸಿತ ಕಂಡಿದೆ ಎಂದು ಬೇಕರ್ಸ್ ಸಮನ್ವಯ ಸಮಿತಿಯ ಕಾರ್ಯದರ್ಶಿ ಶೇಖ್ ಇಸ್ಲಾಮಿಲ್ ಹುಸೇನ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿಯನ್ನೇ ಪದಚ್ಯುತಿಗೊಳಿಸುವ ಸಮಯ ಬಂದಿದೆ: ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಕಿಡಿ

ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜ್​ಗೆ ಬಿಗ್ ಶಾಕ್​​; ಜಾಮೀನು‌ ಅರ್ಜಿ ವಜಾ, ಬಂಧನ ಭೀತಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ ಪ್ರತಿಪಕ್ಷಗಳು; 100 ಕ್ಕೂ ಹೆಚ್ಚು ಸಂಸದರ ಬೆಂಬಲವಿದೆ- ಕಾಂಗ್ರೆಸ್

ಬ್ಯಾಟ್‌ನಲ್ಲಿ ರಬ್ಬರ್ ಇದೆ: Indian ಬ್ಯಾಟರ್ ಅಭಿಷೇಕ್ ಶರ್ಮಾ ವಿರುದ್ಧ ಶ್ರೀಲಂಕಾ ಬ್ಯಾಟರ್‌ನಿಂದ ಬ್ಯಾಟ್ ಟ್ಯಾಂಪರಿಂಗ್ ಆರೋಪ!

ಬಾಯಿ ಮುಚ್ಚಿಕೊಂಡು ಇರಬೇಕೆಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು; ನಾನು-ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT