ಸಂಗ್ರಹ ಚಿತ್ರ 
ವಾಣಿಜ್ಯ

ಎಸ್ ಬಿಐ ಗ್ರಾಹಕರಿಗೆ ಬಂಪರ್; ಸಾಲದ ಮೇಲಿನ ಬಡ್ಡಿದರ ಇಳಿಕೆ

ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ತನ್ನ ಗ್ರಾಹಕರಿಗೆ ಬಂಪರ್ ಘೋಷಣೆ ಮಾಡಿದ್ದು, ಇಂದಿನಿಂದಲೇ ಜಾರಿಯಾಗುವಂತೆ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ.

ನವದೆಹಲಿ: ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ತನ್ನ ಗ್ರಾಹಕರಿಗೆ ಬಂಪರ್ ಘೋಷಣೆ ಮಾಡಿದ್ದು, ಇಂದಿನಿಂದಲೇ ಜಾರಿಯಾಗುವಂತೆ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ.

ಎಸ್ ಬಿಐನ ಗ್ರಾಹಕರು ತೆಗೆದುಕೊಂಡಿರುವ ಗೃಹಸಾಲ ಮತ್ತು ವಾಹನ ಸಾಲಗಳು ಸೇರಿದಂತೆ ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿದರದಲ್ಲಿ ಶೇ.0.10ರಷ್ಟು ಇಳಿಕೆ ಮಾಡಿದೆ. ಅದರಂತೆ ಶೇಕಡಾ 8.25ರಷ್ಟಿದ್ದ ಬಡ್ಡಿ ದರ ಈಗ ಶೇಕಡಾ 8.15ರಷ್ಟಾಗಿದೆ. ಮೇ.1 ರಂದು ಎಸ್ ಬಿಐ ಸಾಲದ ಮೇಲಿನ ಬಡ್ಡಿ ದರದಲ್ಲಿ 40 ಬೇಸಿಕ್ ಪಾಯಿಂಟ್ ಇಳಿಕೆ ಮಾಡಿತ್ತು. ಮೇ ತಿಂಗಳಿಗೂ ಮೊದಲು ಎಸ್ ಬಿಐ ಎಂಸಿಎಲ್ಆರ್ ಬಡ್ಡಿ ದರ ಶೇಕಡಾ 8.55 ನಷ್ಟಿತ್ತು.

ಇನ್ನು ಈ ಹಿಂದೆಯೇ ಎಸ್ ಬಿಐ ಈ ಯೋಜನೆಯನ್ನು ಘೋಷಣೆ ಮಾಡಿತ್ತಾದರೂ ಇಂದಿನಿಂದಲೇ ಜಾರಿಯಾಗಲಿದೆ. ಅದರಂತೆ ಒಂದು ವರ್ಷದಲ್ಲಿ ಐದನೇ ಬಾರಿಗೆ ಎಸ್ ಬಿಐ ತನ್ನ ಎಂಇಎಲ್ಆರ್ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದಂತಾಗದೆ. ಇದಕ್ಕೂ ಮುನ್ನ ಜೂನ್ 10 ರಂದು ಬ್ಯಾಂಕ್ ಬಡ್ಡಿ ದರವನ್ನು ಇಳಿಕೆ ಮಾಡಿತ್ತು.

ಇತ್ತೀಚೆಗಷ್ಟೇ ಎಸ್ ಬಿಐ ತನ್ನ ಗ್ರಾಹಕರ ಎಫ್ ಡಿ (ಫಿಕ್ಸೆಡ್ ಡೆಪಾಸಿಟ್-ಸ್ಥಿರ ಠೇವಣಿ) ಬಡ್ಡಿದರವನ್ನು ಇಳಿಕೆ ಮಾಡಿ ನಿರಾಶೆ ಮೂಡಿಸಿತ್ತು. ಆದರೆ ಈಗ ಮತ್ತೆ ಎಫ್ ಡಿ ಮೇಲಿನ ಬಡ್ಡಿದರವನ್ನು ಮತ್ತೆ ಕಡಿತ ಮಾಡಲಾಗಿದ್ದು, ಶೇ.0.20 ರಿಂದ ಶೇ.0.25ರವರೆಗೂ ಬಡ್ಡಿದರ ಕಡಿತ ಮಾಡಿದೆ. 

ಆ ಮೂಲಕ ಸ್ಥಿರ ಠೇವಣಿ ಬಡ್ಡಿದರ ಶೇ.6.70 ನಿಂದ ಶೇ.6.50 ಕ್ಕೆ(ಒಂದು ವರ್ಷಕ್ಕಿಂತ ಹೆಚ್ಚು, ಎರಡು ವರ್ಷಕ್ಕಿಂತ ಹೆಚ್ಚು ಕಾಲ ಸ್ಥಿರ ಠೇವಣಿ ಇಡುವವರಿಗೆ) ಇಳಿಕೆಯಾಗಲಿದೆ. ಹಿರಿಯ ನಾಗರಿಕರ ಸ್ಥಿರ ಠೇವಣಿ ಬಡ್ಡಿದರವನ್ನು, ಶೇ. 7.20 ರಿಂದ ಶೇ.7.00 ಕ್ಕೆ ಇಳಿಸಲಾಗಿದೆ.

ಇದೀಗ ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುವ ಮೂಲಕ ಅಲ್ಪ ಸಮಾಧಾನ ತಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT