ಯೆಸ್ ಬ್ಯಾಂಕ್ 
ವಾಣಿಜ್ಯ

ಆರ್ಥಿಕ ಬಿಕ್ಕಟ್ಟು: ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು 'ಯೆಸ್' ಎಂದ ಕೋಟಕ್ ಮಹೀಂದ್ರಾ ,ಎಚ್‌ಡಿಎಫ್‌ಸಿ

 ಸಾಲದ ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕಿಗೆ ಆರ್‌ಬಿಐನ ಪರಿಹಾರ ಯೋಜನೆಯಡಿ 500 ಕೋಟಿ ರೂ.ಗಳ ಈಕ್ವಿಟಿ ಕ್ಯಾಪಿಟಲ್ ಅನ್ನು ತುಂಬಿಸಲು ಉದಯ್ ಕೊಟಕ್ ನೇತೃತ್ವದ ಕೊಟಕ್ ಮಹೀಂದ್ರಾ ಬ್ಯಾಂಕ್ ಶುಕ್ರವಾರ ಸಮ್ಮತಿಸಿದೆ. 

ನವದೆಹಲಿ: ಸಾಲದ ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕಿಗೆ ಆರ್‌ಬಿಐನ ಪರಿಹಾರ ಯೋಜನೆಯಡಿ 500 ಕೋಟಿ ರೂ.ಗಳ ಈಕ್ವಿಟಿ ಕ್ಯಾಪಿಟಲ್ ಅನ್ನು ತುಂಬಿಸಲು ಉದಯ್ ಕೊಟಕ್ ನೇತೃತ್ವದ ಕೊಟಕ್ ಮಹೀಂದ್ರಾ ಬ್ಯಾಂಕ್ ಶುಕ್ರವಾರ ಸಮ್ಮತಿಸಿದೆ.

"ಯೆಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ 500 ಕೋಟಿ ರೂ. ('ಈಕ್ವಿಟಿ ಬದ್ಧತೆ') ಹೂಡಿಕೆ ಮಾಡಲು ಬ್ಯಾಂಕ್ ಈಕ್ವಿಟಿ ಬದ್ಧತೆ ಪತ್ರವನ್ನು ನೀಡಿದೆ

ಏತನ್ಮಧ್ಯೆ, ಅಡಮಾನ ಸಾಲದಾತನಾದ ಎಚ್‌ಡಿಎಫ್‌ಸಿ ಲಿಮಿಟೆಡ್ ಸಹ ತೊಂದರೆಗೊಳಗಾಗಿರುವ ಯೆಸ್ ಬ್ಯಾಂಕಿಗೆ ಆರ್‌ಬಿಐ ಕಡ್ಡಾಯ ಪುನರ್ನಿರ್ಮಾಣ ಯೋಜನೆಯ ಪ್ರಕಾರ ಈಕ್ವಿಟಿ ಪಾಲಾಗಿ 1,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿತು.

"ನಿಗಮವು ಯೆಸ್ ಬ್ಯಾಂಕಿನ ತಲಾ 2 ರೂ.ಗಳ 100 ಕೋಟಿ ಇಕ್ವಿಟಿ ಷೇರುಗಳಲ್ಲಿ 1,000 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ. ಪ್ರತಿ ಷೇರಿಗೆ 10 ರೂ. (8 ರೂ. ಪ್ರೀಮಿಯಂ ಸೇರಿದಂತೆ)  ಹೂಡಿಕೆ ಇರಲಿದೆ" ಎಚ್‌ಡಿಎಫ್‌ಸಿ ಲಿಮಿಟೆಡ್ ಹೇಳಿಕೆ ತಿಳಿಸಿದೆ.

1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 45 ರ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಸ್ತಾಪಿಸಿರುವ ಯೆಸ್ ಬ್ಯಾಂಕ್‌ನ ಪುನರ್ನಿರ್ಮಾಣ ಯೋಜನೆಗೆ ಬದ್ಧವಾಗಿದೆ ಮತ್ತು ಇದು ನಿಯಂತ್ರಕ ಅನುಮೋದನೆಗಳು ಮತ್ತು ಇತರ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಅದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT